Advertisement

ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ: ವಿಜಯೇಂದ್ರ ವಿರುದ್ಧ ಮಾಜಿ ಸಂಸದ ಉಗ್ರಪ್ಪ ಕಿಡಿ

04:09 PM Nov 24, 2020 | sudhir |

ಬಳ್ಳಾರಿ: ವಿಜಯೇಂದ್ರರಿಗೆ ನಾಲಿಗೆ ಮೇಲೆ ಹಿಡಿತವಿರಲಿ, ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ, ಸಿಎಂ ಯಡಿಯೂರಪ್ಪ ಅವರ ಮಗ ನೀವು, ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ ಈ ರೀತಿ ಮಾತನಾಡೋದು ಸರಿಯಲ್ಲ ಎಂದು ಕಾಂಗ್ರೇಸ್ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

Advertisement

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಗ್ರಪ್ಪ ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಅಭ್ಯರ್ಥಿ ಹುಡುಕೋ ಕ್ಯಾಪಾಸಿಟಿ ಇಲ್ಲಾ ಎಂದು ವಿಜಯೇಂದ್ರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಉಗ್ರಪ್ಪ, ಅವರು ವಿಜಯೇಂದ್ರ ಬಾಯಿ ಬಿಗಿ ಹಿಡಿದು ಮಾತನಾಡಲಿ RTGS ಮೂಲಕ ಲಂಚ ಪಡೆದವರು ನೀವು, ಪ್ರತಾಪ್ ಗೌಡ ಪಾಟೀಲ್ ಎಲ್ಲಿಂದ ಬಂದವರು, ಆಪರೇಷನ್ ಕಮಲ ಮಾಡಿದವರು ಯಾರು? ಅವರೇಲ್ಲಾ ಎಲ್ಲಿಂದ ಬಂದವರು ಎಂದು ತರಾಟೆಗೆ ತೆಗೆದುಕೊಂಡರು.

ಯುವಕನಾಗಿರೋ ವಿಜಯೇಂದ್ರ ಈ ರೀತಿ ಮಾತನಾಡೋದು ಸರಿಯಲ್ಲ, ಬಿಜೆಪಿ ಒಡೆದ ಮನೆಯಾಗಿದ್ದು ಅನೇಕ ಗುಂಪುಗಳಾಗಿವೆ ಎಂದು ವಾಗ್ಧಳಿ ನಡೆಸಿದ ಉಗ್ರಪ್ಪ ತಮ್ಮ ಪಾಪದ ಕೊಡ ತುಂಬಿದಾಗ ಯಡಿಯೂರಪ್ಪ ಮತ್ತು ಬಿಜೆಪಿ ತಕ್ಕ ಫಲ ತಿನ್ನುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ:ನಿರ್ಭಯಾ ಪ್ರಕರಣದ Delhi Crime ವೆಬ್‌ ಸಿರೀಸ್‌ಗೆ “ಎಮ್ಮಿ ಬೆಸ್ಟ್‌ ಡ್ರಾಮಾ” ಪುರಸ್ಕಾರ

ನಾನು ಬಿಜೆಪಿಯ ಆಂತರಿಕ ವಿಚಾರದ ಬಗ್ಗೆ ಮಾತನಾಡೋದಿಲ್ಲ ಎಂದರು. ಆನಂದ್ ಸಿಂಗ್ ಗಣಿ ಹಗರಣದ ಕೇಸ್ ಖುಲಾಸೆಗಾಗಿ ಹಾಕಿದ ಅರ್ಜಿ ವಾಪಾಸ್ ಪಡೆದಿರೋದು ಅಲ್ಲಿ ಹಿನ್ನಡೆಯಾಗಬಹುದು ಎಂಬ ಮನ ವರಿಕೆಯಾಗಿರಬಹುದು ಹಾಗಾಗಿ ಅರ್ಜಿಯನ್ನು ಹಿಂಪಡೆದಿದ್ದಾರೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next