Advertisement

50 ಸಾವಿರಕ್ಕೂ ಮಿಕ್ಕಿ ಬಿಎಸ್‌ಎನ್‌ಎಲ್‌ ಸಿಬಂದಿಯಿಂದ ವಿಆರ್‌ಎಸ್‌ ಆಯ್ಕೆ

09:36 AM Nov 09, 2019 | Team Udayavani |

ಹೊಸದಿಲ್ಲಿ: ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಟೆಲಿಕಾಂ ಕಂಪೆನಿಗಳನ್ನು ಕೇಂದ್ರ ಸರಕಾರ ವಿಲೀನಗೊಳಿಸಿದ ಬೆನ್ನಲ್ಲೇ ಸ್ವಯಂ ನಿವೃತ್ತಿ (ವಿಆರ್‌ಎಸ್‌)ಆಯ್ಕೆಯನ್ನು ಸರಕಾರ ಮುಂದಿಟ್ಟಿದ್ದು, 50 ಸಾವಿರಕ್ಕೂ ಹೆಚ್ಚು ಮಂದಿ ಆಯ್ಕೆ ಮಾಡಿಕೊಂಡಿದ್ದಾರೆ.

Advertisement

ಬಿಎಸ್‌ಎನ್‌ಎಲ್‌ನಲ್ಲಿ 83 ಸಾವಿರ ಗುರಿ ಇರಿಸಿಕೊಂಡಿದ್ದು, ಇದರಲ್ಲಿ 50 ಸಾವಿರ ತಲುಪಲಾಗಿದೆ. ವಿಆರ್‌ಎಸ್‌ ಆಯ್ಕೆ ಮಾಡಿದವರಲ್ಲಿ 3 ಸಾವಿರ ಮಂದಿ ಎಮ್‌ಎಂಟಿಎನ್‌ಎಲ್‌ನವರು. ಎಂಟಿಎನ್‌ಎಲ್‌ನಲ್ಲಿ 15 ಸಾವಿರ ಗುರಿ ಇಡಲಾಗಿತ್ತು ಎಂದು ಟೆಲಿಕಾಂ ಇಲಾಖೆ ಕಾರ್ಯದರ್ಶಿ ಅಂಶು ಪ್ರಕಾಶ್‌ ಹೇಳಿದ್ದಾರೆ.

ಎರಡೂ ಕಂಪೆನಿಗಳ ವಿಲೀನ ಬಳಿಕ ನ.4ರಂದು ವಿಆರ್‌ಎಸ್‌ ಯೋಜನೆ ಜಾರಿಗೊಳಿಸಿತ್ತು. ಕಳೆದ ಮಂಗಳವಾರ ವರೆಗೆ ಬಿಎಸ್‌ಎನ್‌ಎಲ್‌ನ 22,800 ಮಂದಿ ಸಿಬಂದಿ ವಿಆರ್‌ಎಸ್‌ಗಾಗಿ ಅರ್ಜಿ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next