Advertisement

ಶೆಟ್ಟರ ಗೆಲ್ಲಿಸಲು ವೀರಶೈವ ಲಿಂಗಾಯತ ಪ್ರಮುಖರ ಪ್ರತಿಜ್ಞೆ

09:27 AM Apr 30, 2023 | Team Udayavani |

ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮುದಾಯದ ವಿವಿಧ ಒಳಪಂಗಡಗಳ ಪ್ರಮುಖರು ಹು-ಧಾ ಕೇಂದ್ರ ವಿಧಾನಸಭೆ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಬೆಂಬಲ ಸೂಚಿಸಿದರು.

Advertisement

ಕಾಂಗ್ರೆಸ್‌ ಮುಖಂಡ ಬಂಗಾರೇಶ ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಪ್ರಮುಖರು ಕೈ ಎತ್ತುವ ಮೂಲಕ ಗೆಲ್ಲಿಸುವ ಪ್ರತಿಜ್ಞೆಗೈದರು. ಮಾಜಿ ಸಿಎಂ ಜಗದೀಶ ಶೆಟ್ಟರ
ಮಾತನಾಡಿ, ತಮಗೆ ಬಿಜೆಪಿಯಲ್ಲಿ ಆಗಿರುವ ಅಪಮಾನ, ಸ್ವಾಭಿಮಾನಕ್ಕೆ ಧಕ್ಕೆ ತಂದ ವಿದ್ಯಮಾನಗಳನ್ನು ವಿವರಿಸಿದರು. ಸಮಾಜದ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದರು.

ಬಂಗಾರೇಶ ಹಿರೇಮಠ ಮಾತನಾಡಿ, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಜಗದೀಶ ಶೆಟ್ಟರ ಅವರಿಗೆ ಮತ್ತೆ ಅತ್ಯುನ್ನತ ಸ್ಥಾನ ದೊರೆಯುವ ಅವಕಾಶವಿದೆ. ನಾವೆಲ್ಲರೂ ಶೆಟ್ಟರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸೋಣ ಎಂದರು.

ನೀಲಕಂಠ ಅಸೂಟಿ, ಪ್ರೊ| ಐ.ಜಿ. ಸನದಿ, ಅನಿಲಕುಮಾರ ಪಾಟೀಲ ಮಾತನಾಡಿ, ಜಗದೀಶ ಶೆಟ್ಟರ ಅವರು
ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದಿದ್ದರಿಂದ ಬಿಜೆಪಿಯವರು ವಿಚಲಿತರಾಗಿದ್ದಾರೆ. ಪಕ್ಷದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದು, ಶೆಟ್ಟರ ಅವರು ಗೆಲುವಿನ ನಗೆ ಬೀರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಬಿಜೆಪಿಯವರ ಪೊಳ್ಳು ಬೆದರಿಕೆಗಳಿಗೆ ಭಯ ಪಡದೆ ನಾವೆಲ್ಲರೂ
ಶೆಟ್ಟರ ಗೆಲುವಿಗೆ ಶ್ರಮಿಸೋಣ ಎಂದರು. ಮುಖಂಡರಾದ ಬಾಪುಗೌಡ ಪಾಟೀಲ, ಶಿವಪುತ್ರಪ್ಪ ಕಮತರ, ಮಲ್ಲಿಕಾರ್ಜುನ ಸಾವಕಾರ, ಸದಾಶಿವಯ್ಯ ಹಿರೇಮಠ, ಕಲ್ಲಪ್ಪ ಯಲಿವಾಳ, ಆರ್‌.ಕೆ. ಪಾಟೀಲ, ಎಂ.ಎಸ್‌. ಪಾಟೀಲ, ಸುನಿಲ ಮಠಪತಿ, ಸರೋಜ ಹೂಗಾರ, ಸುನಿತಾ ಹುರಕಡ್ಲಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next