Advertisement
ಪ್ರಧಾನಿ ಮೋದಿ ಕಲಬುರಗಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಆ ಭಾಗದ ಜನರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇವತ್ತಿಗೂ ನೂರಕ್ಕೆ ನೂರು ನನ್ನನ್ನು ಕೈ ಬಿಡುವುದಿಲ್ಲ. ಪ್ರಚಾರ ಮಾಡಿ ಹೋದರೆ ಜನರು ಬದಲಾಗುವುದಿಲ್ಲ. ನಾನು ಹಿಂದೆ ಏನೇನು ಮಾಡಿದ್ದೇನೆ ಎಂದು ಜನರಿಗೆ ಗೊತ್ತಿದೆ. ಪ್ರಧಾನಿ ಮತ್ತು ಗೃಹ ಸಚಿವರಿಗೆ ಕಲಬುರಗಿ ಮೇಲೆ ಪ್ರೀತಿ, ಅದಕ್ಕಾಗಿಯೇ ಅವರು ಮೇಲಿಂದ ಮೇಲೆ ಬರುತ್ತಾರೆ ಎಂದು ವ್ಯಂಗ್ಯವಾಡಿದರು. ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ಜೆ ತಿದ್ದುಪಡಿಗೆ ಎಲ್.ಕೆ. ಅಡ್ವಾಣಿ ಅವರ ಬಳಿ ನೀಡಿದಾಗ ಅವರು ಅದನ್ನು ಕಸಕ್ಕೆ ಹಾಕಿದ್ದರು. ಅದನ್ನು ನಮ್ಮ ಯುಪಿಎ ಅವಧಿಯಲ್ಲಿ ನಾವು ಜಾರಿಗೆ ತಂದಿದ್ದೇವೆ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಮೇಲೆ ಕಣ್ಣಿಟ್ಟಿರಬಹುದು. ಯಾರೇ ಕಲಬುರಗಿಗೆ ಬಂದು ರಾಜಕೀಯ ಮಾಡಿದರೂ ತೀರ್ಪು ಕೊಡುವವರು ಕಲಬುರಗಿಯ ಜನ. ಖರ್ಗೆಯವರು ಕೊನೆಯ ಚುನಾವಣೆ ಎಂದು ಹೇಳಿಲ್ಲ.
● ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ.