Advertisement

ಮೋದಿ, ಬಿಜೆಪಿಯಲ್ಲೀಗ ಜನರಿಗೆ ವಿಶ್ವಾಸ ಉಳಿದಿಲ್ಲ : ರಾಹುಲ್‌ ಗಾಂಧಿ

11:26 AM Dec 12, 2018 | Team Udayavani |

ಹೊಸದಿಲ್ಲಿ : ಪಂಚರಾಜ್ಯ ಚುನಾವಣಾ ಫ‌ಲಿತಾಂಶದಿಂದ ಜನರಿಗೆ ಪ್ರಧಾನಿ ಮೋದಿ ಅವರಲ್ಲಾಗಲೀ ಬಿಜೆಪಿಯಲ್ಲಾಗಲೀ ಈಗ ವಿಶ್ವಾಸ ಉಳಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. 

Advertisement

ಕಾಂಗ್ರೆಸ್‌ ಪಕ್ಷ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ವಿಜಯ ಸಾಧಿಸಿದ್ದು ಈ ಮೂರೂ ಹಿಂದಿ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. 

ಕಾಂಗ್ರೆಸ್‌ ಗೆ ಮೂರು ಪ್ರಮುಖ ರಾಜ್ಯಗಳಲ್ಲಿ ದೊರಕಿರುವ ಯಶಸ್ಸು 2019ರ ಲೋಕಸಭೆ ಚುನಾವಣೆಗೆ  ಹೊಸ ಹುಮ್ಮಸ್ಸು, ಧೈರ್ಯವನ್ನು ತುಂಬಿದೆ. ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಿನಿಂದ ಕೈಜೋಡಿಸಿದರೆ ಬಿಜೆಪಿಯನ್ನು ಹಣಿಯಲು ಸಾಧ್ಯ ಎಂಬುದೀಗ ಸಾಬೀತಾಗಿದೆ. ಕಾಂಗ್ರೆಸ್‌ನ ಈ ಮಹಾ ವಿಜಯವು ದ್ವೇಷ ರಾಜಕಾರಣದ ವಿರುದ್ದ ಸಾಧಿಸಲಾಗಿರುವ ಗೆಲುವಾಗಿದೆ ಎಂದು ರಾಹುಲ್‌ ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next