Advertisement

ಮತ ಪಟ್ಟಿ ಶುದ್ಧೀಕರಣಕ್ಕೆ ಮನೆ ಮನೆ ಭೇಟಿ; ದೋಷಮುಕ್ತ ಮತದಾರ ಪಟ್ಟಿಗಾಗಿ ಆಯೋಗ ಸಮೀಕ್ಷೆ

02:05 AM Mar 26, 2022 | Team Udayavani |

ದಾವಣಗೆರೆ: ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯನ್ನು ಸುವ್ಯವಸ್ಥಿತವಾಗಿ ನಡೆಸಲು ರಾಜ್ಯ ಚುನಾವಣ ಆಯೋಗ ಸಿದ್ಧತೆ ಆರಂಭಿಸಿದ್ದು, ಮನೆ ಮನೆ ಸಮೀಕ್ಷೆ ಕೈಗೊಂಡು ದೋಷಮುಕ್ತ ಮತದಾರರ ಪಟ್ಟಿ ತಯಾರಿಸಲು ಮುಂದಾಗಿದೆ.

Advertisement

ಪ್ರಸ್ತುತ ಪ್ರಾಯೋಗಿಕವಾಗಿ ರಾಜ್ಯದ 43 ವಿಧಾನಸಭಾ ಕ್ಷೇತ್ರಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿದೆ. ಮನೆ ಮನೆಗೆ ಭೇಟಿ ನೀಡಿ ಅರ್ಹ ಮತದಾರರ ಮಾಹಿತಿ ಸಂಗ್ರಹಿಸಿ ವಿಧಾನ ಸಭೆ ಮತಕ್ಷೇತ್ರದ ಮತದಾರರ ಪಟ್ಟಿ ಶುದ್ಧೀ ಕರಣಗೊಳಿಸಬೇಕು. ತನ್ಮೂಲಕ ಮತದಾರರ ಪಟ್ಟಿ ನಿಖರ ಮತ್ತು ದೋಷ ಮುಕ್ತವಾಗುವಂತೆ ಮಾಡುವ ಪರಿ ಶೀಲನ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ.

ನಿರ್ದೇಶನವೇನು?
ಮತದಾರರ ನೋಂದಣಾಧಿಕಾರಿಗಳು ಮತಗಟ್ಟೆಗಳ ಮತದಾರರ ಪಟ್ಟಿ ಸಮೀಕ್ಷೆಯ ಪರಿಶೀಲನೆ ಹಾಗೂ ಅಪೇಕ್ಷಿಸಿರುವ ಎಲ್ಲ ವಿವರಗಳನ್ನು ಆಯೋಗದ ನಿಗದಿತ ನಮೂನೆ, ಅನುಬಂಧದಲ್ಲಿ ಒದಗಿಸ ಬೇಕು. ತತ್‌ಕ್ಷಣದಿಂದಲೇ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಲ್ಲ ಮತಗಟ್ಟೆಯ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ), ಗ್ರಾಮ ಲೆಕ್ಕಾಧಿ ಕಾರಿ, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರ್‌ಗೆ ಸಮೀಕ್ಷೆ ಕುರಿತು ತರಬೇತಿ ನೀಡಬೇಕು. ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಮತದಾರರ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು ಎಂದು ಚುನಾವಣ ಆಯೋಗ ನಿರ್ದೇಶನ ನೀಡಿದೆ.

ಇದನ್ನೂ ಓದಿ:ಭಾರತದ 16 ಮಂದಿ ಮೀನುಗಾರರನ್ನು ವಾಪಸ್‌ ಕರೆಯಿಸಿಕೊಳ್ಳಲು ಭಾರತ ಬದ್ಧ: ಕೇಂದ್ರ

ಸಮೀಕ್ಷೆಗೆ ಆಯ್ಕೆಯಾದ ಕ್ಷೇತ್ರಗಳು
ದಕ್ಷಿಣ ಕನ್ನಡದ ಮಂಗಳೂರು, ಉಡುಪಿಯ ಕಾಪು, ಬೈಂದೂರು, ಕೊಡಗಿನ ಮಡಿಕೇರಿ, ವಿರಾಜಪೇಟೆ, ಉತ್ತರ ಕನ್ನಡದ ಭಟ್ಕಳ, ಚಿಕ್ಕಮಗಳೂರಿನ ಕಡೂರು, ಬೆಂಗಳೂರು ನಗರದ ಚಿಕ್ಕಪೇಟೆ, ಸರ್ವಜ್ಞನಗರ, ಬಸವನಗುಡಿ, ಯಶವಂತಪುರ. ಬಾಗಲಕೋಟೆಯ ತೇರದಾಳ, ಬೆಂಗಳೂರು ಗ್ರಾಮೀಣದ ಹೊಸಕೋಟೆ, ಬೆಳಗಾವಿಯ ಕಾಗವಾಡ, ನಿಪ್ಪಾಣಿ, ಬಳ್ಳಾರಿಯ ಹಡಗಲಿ, ಕಂಪ್ಲಿ, ಬೀದರ್‌ ದಕ್ಷಿಣ, ವಿಜಯಪುರದ ವಿಜಯಪುರ ನಗರ, ಸಿಂಧಗಿ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಚಿತ್ರದುರ್ಗದ ಹಿರಿಯೂರು, ದಾವಣಗೆರೆ ಉತ್ತರ, ಧಾರವಾಡದ ಕುಂದ ಗೋಳ, ಕಲಬುರಗಿ ಗ್ರಾಮೀಣ, ಚಿಂಚೋಳಿ, ಹಾಸನದ ಶ್ರವಣಬೆಳಗೋಳ, ಹಾವೇರಿಯ ಬ್ಯಾಡಗಿ,ಕೋಲಾರದ ಮುಳಬಾಗಿಲು, ಕೊಪ್ಪಳದ ಕುಷ್ಟಗಿ, ಮಂಡ್ಯದ ಮಳವಳ್ಳಿ, ಮೈಸೂರಿನ ಚಾಮುಂಡೇಶ್ವರಿ, ನರಸಿಂಹರಾಜ, ರಾಯಚೂರಿನ ಮಾನ್ವಿ, ರಾಯಚೂರು ಗ್ರಾಮೀಣ, ರಾಮನಗರದ ಕನಕಪುರ, ಶಿವಮೊಗ್ಗ ಗ್ರಾಮೀಣ, ಚಾಮರಾಜನಗರ, ಗದಗ, ತುಮಕೂರಿನ ಮಧುಗಿರಿ, ತುರುವೇಕೆರೆ, ಯಾದಗಿರಿಯ ಸುರಪುರ, ಗುರುಮಿಠಕಲ್‌ ಕ್ಷೇತ್ರಗಳು.

Advertisement

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next