Advertisement

“ಸದೃಢ ಭಾರತ ನಿರ್ಮಾಣದ ನರೇಂದ್ರ ಮೋದಿಗೆ ಮತ ನೀಡಿ’

11:20 PM Apr 12, 2019 | Sriram |

ಮಲ್ಪೆ: ಜಾತಿ, ಧರ್ಮಗಳ ಓಲೈಕೆಯ ಸಮೀಕರಣದಲ್ಲಿ ದೇಶವನ್ನು ವಿಭಜಿಸಿ ಪ್ರತಿ ಬಾರಿಯೂ ಚುನಾವಣೆ ಎದುರಿಸುವ ಕಾಂಗ್ರೆಸ್‌ಗೆ ಈ ಬಾರಿ ಮತದಾರ ತಕ್ಕ ಉತ್ತರ ಕೊಟ್ಟು ಸದೃಢ ಭಾರತದ ಕನಸು ಕಂಡಿರುವ ಮೋದಿ ಮತ್ತೂಮ್ಮೆ ಅಧಿಕಾರದ ಗದ್ದುಗೆ ಏರುವಂತೆ ಮಾಡಬೇಕೆಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

Advertisement

ಅವರು ಟೀಂ ಮೋದಿ ವತಿಯಿಂದ ಮಲ್ಪೆ ವಡಭಾಂಡೇಶ್ವರ ದೇವಸ್ಥಾನ ಸಮೀಪದ ಮೈದಾನದಲ್ಲಿ ಬುಧವಾರ ನಡೆದ ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಬಹಿರಂಗ ಸಭೆಯಲ್ಲಿ ಮಾತನಾಡಿದರು.

ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನದಿಂದಲೇ ಜಾತಿ ಸಮೀಕರಣದ ಆಧಾರದ ಮೇಲೆ ಈ ದೇಶ ವಿಭಜಿಸಿ ತುಂಡು ತುಂಡು ಮಾಡಲಾಗಿದೆ.

ಆದರೆ ಪ್ರಧಾನಿ ಮೋದಿ ಜಾತಿ, ಜಾತಿಗಳ ನಡುವೆ ಕಂದಕ, ಒಡಕು ಸೃಷ್ಟಿಸದೇ ಸಮರ್ಥ ದೇಶ ಕಟ್ಟಿದ್ದರೆಂದರು.ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತ್ಯುತ್ತರ ಕೊಟ್ಟ ಭಾರತೀಯ ಸೇನೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಬದಲಾಗಿ ಕಾಂಗ್ರೆಸ್‌ ಸಾಕ್ಷಿ ಕೇಳುತ್ತಿದೆ. ಈ ಬಾರಿ ಮತದಾರರು ದೇಶವನ್ನು ಅಂತರಿಕವಾಗಿ ಬಲಪಡಿಸಿದ ಮೋದಿಗೆ ಮತ ನೀಡಿ ಇವಿಎಂ ಯಂತ್ರದಲ್ಲಿ ಸಾಕ್ಷಿ ನೀಡುವುದಾಗಿ ಹೇಳಬೇಕೆಂದು ಮನವಿ ಮಾಡಿದರು. ಯೋಧ ವಸಂತ್‌ ಪತ್ನಿ ರೋಶನಿ ವಸಂತ್‌ ಕಾರ್ಯಕ್ರಮ ಉದ್ಘಾಟಿಸಿದರು. ಟೀಂ ಮೋದಿಯ ಶಶಿಧರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next