Advertisement

ಮನಪರಿವರ್ತನೆ ಆಗಿ ಜೆಡಿಎಸ್‌ಗೆ ಮತಹಾಕಿಲ್ಲ: ಜಿ.ಟಿ.ದೇವೇಗೌಡ

07:40 PM Jul 02, 2022 | Team Udayavani |

ಬೆಂಗಳೂರು: 2023ರ ಚುನಾವಣೆ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಕ್ಷೇತ್ರದ ಮತದಾರರು ಯಾವ ತೀರ್ಮಾನ ಕೈಗೊಳ್ಳುತ್ತಾರೋ, ಆ ನಿರ್ಧಾರದಂತೆ ನಾನು, ಮುನ್ನಡೆಯುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಯುಡಿಯೂರಪ್ಪ ಅವರಿಗೆ ಅಧಿಕಾರ ಸಿಗಲಿಲ್ಲ ಎಂಬ ಕಾರಣದಿಂದಾಗಿಯೇ ಬಿಜೆಪಿ ಸೇರಿದ್ದೆ. ಅವರನ್ನು ಮುಖ್ಯಮಂತ್ರಿ ಮಾಡಿ ನಂತರ ಜೆಡಿಎಸ್‌ಗೆ ಮರಳಿದ್ದೆ ಎಂದು ತಿಳಿಸಿದರು.

ಜೆಡಿಎಸ್‌ನ ಕಾರ್ಯ ಚಟುವಟಿಕೆಯಿಂದ ದೂರವಿರುವುದರ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ನಾನು ನನ್ನ ಕ್ಷೇತ್ರದಲ್ಲಿ ಮಾತ್ರ ಶಾಸಕನಾಗಿ ತೊಡಗಿಕೊಂಡಿದ್ದೇನೆ. ಪಕ್ಷದ ಚಟುವಟಿಕೆಗಳಲ್ಲಿ ಆಗಲಿ, ಸಮಾರಂಭದಲ್ಲಾಗಲಿ ನಾನು ಭಾಗವಹಿಸಿಲ್ಲ.ಅವುಗಳಿಂದ ದೂರ ಎಂದರು.

ಇದನ್ನೂ ಓದಿ:ಆ.15 ರೊಳಗೆ ಇ-ಕಚೇರಿಯನ್ನಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ನಿರಾಣಿ ತಾಕೀತು

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತಹಾಕಿದ್ದು ಮನ ಪರಿವರ್ತನೆ ಹಿನ್ನೆಲೆಯಲ್ಲಿ ಅಲ್ಲ. ರಾಜ್ಯಸಭೆಗೆ ದೇವೇಗೌಡರು ಸ್ಪರ್ಧಿಸಿದಾಗ ನಾನೇ ಅವರಿಗೆ ಮತಹಾಕುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದೆ.ಅದೇ ರೀತಿ ಈ ಬಾರಿ ನಡೆದ ರಾಜ್ಯಸಭಾ ಚುನಾವಣೆಯಲ್ಲೂ ಜೆಡಿಎಸ್‌ ಅಭ್ಯರ್ಥಿಗೆ ಮತಹಾಕಿದ್ದಾನೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next