Advertisement

EVM ಧ್ವಂಸಗೈದ ಶಾಸಕನಿಗೆ ಮತ ಎಣಿಕೆ ಕೇಂದ್ರಕ್ಕೆ ನಿರ್ಬಂಧ

11:53 PM Jun 03, 2024 | Team Udayavani |

ಹೊಸದಿಲ್ಲಿ: ಚುನಾವಣ ಬೂತ್‌ನಲ್ಲಿ ಇವಿಎಂ ಧ್ವಂಸಗೈದ ಆರೋಪ ಎದುರಿಸುತ್ತಿರುವ ವೈಎಸ್‌ಆರ್‌ ಕಾಂಗ್ರೆಸ್‌ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರಿಗೆ ಸುಪ್ರೀಂ ಕೋರ್ಟ್‌ ಮತ ಎಣಿಕೆ ಕೇಂದ್ರವನ್ನು ಪ್ರವೇಶಿಸದಂತೆ ನಿರ್ಬಂಧ ಹೇರಿದೆ.

Advertisement

ಮಚೆರ್ಲಾ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ರೆಡ್ಡಿ ಅವರು ಪ್ರವೇಶಿಸದಂತೆ ಸೂಚಿಸಿದೆ. ಮೇ 13ರಂದು ನಡೆದ ಘಟನೆಯ ವಿಡಿಯೋ ವೀಕ್ಷಿಸಿದ ನ್ಯಾ| ಅರವಿಂದ್‌ ಕುಮಾರ್‌, ನ್ಯಾ| ಸಂದೀಪ್‌ ಮೆಹ್ತಾ ಅವರು, ರೆಡ್ಡಿಗೆ ಹೈಕೋರ್ಟ್‌ನಲ್ಲಿ ದೊರೆತಿರುವ ನಿರೀಕ್ಷಣ ಜಾಮೀನು ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತಿದೆ ಎಂದು ಹೇಳಿದೆ. ಜೂ.6ರಂದು ರೆಡ್ಡಿ ವಿರುದ್ಧದ ಪ್ರಕರಣಗಳ ವಿಚಾರಣೆಯಿದ್ದು, ಮೇ 28ರ ಜಾಮೀನು ಅದಕ್ಕೆ ಪ್ರಭಾವ ಬೀರದಂತೆ ವಿಚಾರಣೆ ನಡೆಸಲು ಆಂಧ್ರ ಪ್ರದೇಶ ಹೈಕೋರ್ಟ್‌ ಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next