Advertisement

ದಲಿತನನ್ನು ವಿವಸ್ತ್ರಗೊಳಿಸಿದ ಥಳಿಸಿದ ಸವರ್ಣೀಯರು:

03:50 AM Jan 19, 2017 | |

ತುಮಕೂರು: ಸವರ್ಣೀಯ ಯುವತಿಯನ್ನು ಮಾತನಾಡಿಸಿದನೆಂಬ ಕಾರಣಕ್ಕೆ ದಲಿತ ಹುಡುಗನನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಥಳಿಸಿದ ಘಟನೆ ಇತ್ತೀಚೆಗೆ ಗುಬ್ಬಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಹಲ್ಲೆಗೊಳಗಾದ ಯುವಕ ಅಭಿಷೇಕ್‌ ಪ್ರಸ್ತುತ ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೇಂಟರ್‌ ಆಗಿರುವ ಈತನನ್ನು ಗುಬ್ಬಿ ಸಮೀಪದ ತೋಟದ ಮನೆಗೆ ಕರೆದುಕೊಂಡು ಹೋದ ಗುಂಪು, ಅಲ್ಲಿ ಆತನನ್ನು ವಿವಸ್ತ್ರಗೊಳಿಸಿ “ಗುಬ್ಬಿಯ ಹುಡುಗಿಯರನ್ನು ಕೆಣಕಿದರೆ ಇದೇ ಗತಿ’ ಎಂದು ಬರೆದ ಸ್ಲೇಟ್‌ ಕೈಗೆ ನೀಡಿ ಪೋಟೋ ತೆಗೆದಿದೆ. ಬಳಿಕ ಥಳಿಸಿ ನಾನಾ ರೀತಿಯಲ್ಲಿ ಅವಮಾನ ಮಾಡಿದ್ದು ವಾಟ್ಸಾಪ್‌ಗ್ಳಲ್ಲಿ ಹರಿಬಿಟ್ಟಿದೆ.

10 ಮಂದಿ ವಿರುದ್ಧ ಪ್ರಕರಣ:
ಯುವಕನ ತಂದೆ ಗುಬ್ಬಿ ಠಾಣೆಯಲ್ಲಿ ದೂರು ನೀಡಿದ್ದು, ಯುವತಿಯ ತಂದೆ ಸೇರಿ 10 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಪ್ರಕಾಶ್‌, ಮಾರುತಿ, ರಮೇಶ್‌ ಅವರನ್ನು ಈಗಾಗಲೇ ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಚಿದಾನಂದ ಸ್ವಾಮಿ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ. ದಲಿತ ಪರ ಸಂಘಟನೆಗಳು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ.

ದಲಿತ ಯುವಕನ ಮೇಲೆ ಹಲ್ಲೆ ನಡೆದಿದೆ. ಯುವತಿಯನ್ನು ಸದಾ ಮಾತನಾಡಿಸುತ್ತಿದ್ದ ಎನ್ನುವ ಕಾರಣದಿಂದ ಈ ಘಟನೆ ನಡೆದಿದ್ದು, ಈ ಸಂಬಂಧವಾಗಿ ಪ್ರಕರಣ ದಾಖಲಾಗಿದೆ. ಪ್ರಮುಖ 3 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು.
-ಜಿ.ಬಿ. ಮಂಜುನಾಥ್‌, ಎಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next