Advertisement

ಉದ್ಯಮ ಮಿತ್ರ ಸರ್ಕಾರ: ವಿವಾದ್ ಸೇ ವಿಶ್ವಾಸ್- 2 ಯೋಜನೆ

08:45 PM Feb 01, 2023 | Team Udayavani |

ಉದ್ಯಮ ಸ್ನೇಹಿ ನಿರ್ಣಯಗಳ ಮೂಲಕ ವ್ಯಾಪಾರ-ವಹಿವಾಟು ಸುಲಭಗೊಳಿಸಲು ಹಲವು ಕ್ರಮ ಕೈಗೊಂಡಿರುವ ಮೋದಿ ಸರ್ಕಾರ, ಉದ್ಯಮಿಗಳಿಗೆ ಪೂರಕವಾಗುವಂತೆ ವಿವಾದ್‌ ಸೇ ವಿಶ್ವಾಸ್‌-2, ಒನ್‌ ಸ್ಟಾಪ್‌ ಸಲ್ಯೂಷನ್‌, ಇ-ಕೋರ್ಟ್‌ಗಳ ಸ್ಥಾಪನೆ ಸೇರಿದಂತೆ ವಿವಿಧ ಪರಿಹಾರಗಳನ್ನು ಘೋಷಿಸಿದೆ.

Advertisement

ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳ ಜತೆಗಿನ ಒಪ್ಪಂದಗಳಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ವಿವಾದ್‌ ಸೇ ವಿಶ್ವಾಸ್‌-2 ಅನ್ವಯ ಪರಿಹಾರ ಯೋಜನೆ ಘೋಷಿಸುವುದಾಗಿ ತಿಳಿಸಿದೆ.

ಅಲ್ಲದೇ, ವಿವಿಧ ಸರ್ಕಾರಿ ಸಂಸ್ಥೆಗಳಿಗೆ ವ್ಯಕ್ತಿಯ ಒಂದೇ ಮಾಹಿತಿಯನ್ನು ಪ್ರತ್ಯೇಕವಾಗಿ ಒದಗಿಸುವುದನ್ನು ತಡೆಗಟ್ಟಲು ಪರಿಹಾರಕ್ರಮವಾಗಿ ಒನ್‌ಸ್ಟಾಪ್‌- ಒನ್‌ಸಲ್ಯೂಷನ್‌ ಯೋಜನೆ ಪರಿಚಯಿಸಲು ನಿರ್ಣಯಿಸಿದೆ.

ಜತೆಗೆ ವಿವಾದಗಳ ಪರಿಹಾರಕ್ಕಾಗಿ 7 ಸಾವಿರ ಕೋಟಿ ರೂ.ವೆಚ್ಚದಲ್ಲಿ ಇ- ಕೋರ್ಟ್‌ಗಳನ್ನು ಸ್ಥಾಪಿಸುವುದಾಗಿ ತಿಳಿಸಿದೆ. ಉದ್ಯಮ ಸ್ಥಾಪನೆಗೆ ಅಗತ್ಯವಿರುವ ಸರ್ಕಾರದ ಎಲ್ಲಾ ಡಿಜಿಟಲ್‌ ಸೇವೆಗಳನ್ನು ಪ್ಯಾನ್‌ಕಾರ್ಡ್‌ಗಳನ್ನು ಆಧಾರವಾಗಿಟ್ಟುಕೊಂಡೇ ಬಳಸಿಕೊಳ್ಳಲು ಅನುವು ಮಾಡಿಕೊಡುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next