Advertisement

ಕುರಿಯ ಪ್ರತಿಷ್ಠಾನದ ವಿಂಶತಿ ಉತ್ಸವ

06:00 AM Dec 14, 2018 | Team Udayavani |

ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ವಿಂಶತಿ ಉತ್ಸವದ ಸಪ್ತಾಹ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.14ರಿಂದ 23 ತನಕ ಜರಗಲಿದೆ. ಈ ಸಾಲಿನ ಕುರಿಯ ಪ್ರಶಸ್ತಿ ತೆಂಕುತಿಟ್ಟಿನ ಪ್ರಸಿದ್ಧ ಮದ್ದಲೆ ವಾದಕರಾದ ಪೆರುವಾಯಿ ನಾರಾಯಣ ಭಟ್‌ರಿಗೆ ಡಿ.16ರಂದು ನೀಡಲಾಗುವುದು. 

Advertisement

ಪೆರುವಾಯಿ ನಾರಾಯಣ ಭಟ್‌ ಬಂಟ್ವಾಳ ತಾಲೂಕಿನ ಪೆರುವಾಯಿಯವರಾದ ನಾರಾಯಣ ಭಟ್‌ ಹಿಮ್ಮೇಳ ವಾದನದಲ್ಲಿ ಆಸಕ್ತಿ ಹೊಂದಿದ್ದರು. ಮಾತಾಮಹರಾದ ಪ್ರಸಿದ್ಧ ಮದ್ದಲೆವಾದಕ ಕೊಂದಲಕಾಡು ನಾರಾಯಣ ಭಟ್ಟರಲ್ಲಿ ಚೆಂಡೆ – ಮದ್ದಲೆ ವಾದನ ಕಲಿತರು . 1974 ರಲ್ಲಿ ಸುಪ್ರಸಿದ್ಧ ಭಾಗವತರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳಿಂದಾಗಿ ಸೊರ್ನಾಡ್‌ ಮೇಳಕ್ಕೆ ಸೇರಿ ತಿರುಗಾಟ ಆರಂಭಿಸಿದರು . 1975ರಲ್ಲಿ ಬಲಿಪ ನಾರಾಯಣ ಭಾಗವತರು ಭಟ್ಟರ ಮದ್ದಲೆ ವಾದನವನ್ನು ಮೆಚ್ಚಿ ಕಟೀಲು 2ನೇ ಮೇಳಕ್ಕೆ ಕರೆ ತಂದರು. ಅಂದು ಮೇಳದಲ್ಲಿದ್ದ ಪ್ರಸಿದ್ಧ ಮದ್ದಲೆ ವಾದಕ ನೆಡ್ಲೆ ನರಸಿಂಹ ಭಟ್‌ರ ಒಡನಾಟದಲ್ಲಿ ಮದ್ದಲೆಯ ಸೂಕ್ಷ್ಮ ಪಟ್ಟುಗಳನ್ನು ಕಲಿತರು . ಇರಾ ಗೋಪಾಲಕೃಷ್ಣ ಭಾಗವತರು , ಬಲಿಪ ಭಾಗವತರ ಸಾಂಗತ್ಯದಲ್ಲಿ ಯಕ್ಷಗಾನದ ಒಳಗನ್ನು ಅರಿತು ಹಿಮ್ಮೇಳದಲ್ಲಿ ಪಾರಮ್ಯ ಮೆರೆದರು .ನಾಜೂಕಿನ ಹೊಡೆತ , ತಾಳ – ಲಯಗಳಲ್ಲಿಯ ಅಪ್ರತಿಮ ಹಿಡಿತ , ಪರಂಪರೆ ಶೈಲಿಯ ತಾಡನಗಳಲ್ಲಿ ಹೆಸರು ಗಳಿಸಿದರು . ಯಕ್ಷಗಾನದ ಅಪರೂಪದ ಮದ್ದಲೆಯ ಸೂಕ್ಷ್ಮತೆಗಳನ್ನು ಬಲ್ಲ ಕೆಲವೇ ವಾದಕರಲ್ಲಿ ಭಟ್ಟರೂ ಓರ್ವರೆಂದು ಪರಿಗಣಿಸಲ್ಪಟ್ಟಿದ್ದಾರೆ . ಯುವ ಭಾಗವತರಾದ ಪಟ್ಲ ಸತೀಶ ಶೆಟ್ಟರು ಕಟೀಲು 2ನೇ ಮೇಳದ ಭಾಗವತರಾಗಿದ್ದ ಸಂದರ್ಭದಲ್ಲಿ ಯೋಗ್ಯ ಮಾರ್ಗದರ್ಶನ ನೀಡಿ ಪಟ್ಲ – ಪೆರುವಾಯಿ ಜೋಡಿ ಪ್ರಸಿದ್ಧವಾಗಿತ್ತು . ಹಿಮ್ಮೇಳ ವಾದಕರಾಗಿ ಐದು ದಶಕಗಳ ಕಾಲ ತಿರುಗಾಟ ನಡೆಸಿದ್ದು , ಕಟೀಲು ಮೇಳದಲ್ಲೆ 43 ವರ್ಷಗಳ ತಿರುಗಾಟ ನಡೆಸಿ , ಈ ವರ್ಷ ನಿವೃತ್ತರಾಗಿದ್ದಾರೆ .ಯಕ್ಷಗಾನ ತರಬೇತಿಯ ಮೂಲಕ ನೂರಾರು ಶಿಷ್ಯರನ್ನು ಯಕ್ಷರಂಗಕ್ಕೆ ನೀಡಿದ್ದಾರೆ . 
 
 ಎಂ .ಶಾಂತರಾಮ ಕುಡ್ವ 

Advertisement

Udayavani is now on Telegram. Click here to join our channel and stay updated with the latest news.

Next