Advertisement

Vitla: ಹೊಳೆಗೆ ಬಿದ್ದ ವೃದ್ಧರೊಬ್ಬರ ರಕ್ಷಿಸಿದ ಯುವಕರು; ಶ್ಲಾಘನೆ

12:46 AM Oct 08, 2024 | Team Udayavani |

ವಿಟ್ಲ: ವಿಟ್ಲ ಪರಿಸರದಲ್ಲಿ ರವಿವಾರ ಭಾರೀ ಮಳೆಗೆ ಚರಂಡಿ, ತೋಡು, ಹೊಳೆಗಳು ಉಕ್ಕಿ ಹರಿದಿದ್ದು, ಈ ಸಂದರ್ಭ ಆಯತಪ್ಪಿ ಹೊಳೆಗೆ ಬಿದ್ದ ವೃದ್ಧ ವ್ಯಕ್ತಿಯೊಬ್ಬರ ಯುವಕರಿಬ್ಬರು ರಕ್ಷಿಸಿದ್ದಾರೆ.

Advertisement

ವಿಟ್ಲಕಸಬಾ ಗ್ರಾಮದ ಸುರುಂಬಡ್ಕದಲ್ಲಿ ಒಕ್ಕೆತ್ತೂರು ಹೊಳೆಯ ಕಿಂಡಿ ಅಣೆಕಟ್ಟು ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 70ರ ಹರೆಯದ ಉಮ್ಮರ್‌ ಆಯತಪ್ಪಿ ಹೊಳೆಗೆ ಬಿದ್ದಿದ್ದರು. ಕೂಡಲೇ ಅಲ್ಲೇ ಇದ್ದ ಚೆಕ್ಕಿದಕಾಡು ನಿವಾಸಿಗಳಾದ ಅಶೋಕ್‌ ಸಿ.ಎಚ್‌. ಹಾಗೂ ಸುರೇಶ್‌ ಸಿ.ಎಚ್‌. ತಮ್ಮ ಜೀವವನ್ನು ಲೆಕ್ಕಿಸದೆ ಪ್ರವಾಹಕ್ಕೆ ಧುಮುಕಿ ಉಮ್ಮರ್‌ ಅವರನ್ನು ದಡಕ್ಕೆ ಎಳೆದು ತಂದು ಅಪಾಯದಿಂದ ಪಾರು ಮಾಡಿದ್ದಾರೆ.

ಜತೆಗಿದ್ದ ಸ್ಥಳೀಯರು ಕಾರ್ಯಾಚರಣೆಗೆ ಸಹಕರಿಸಿದರು. ಯುವಕರ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next