Advertisement

ವಿಟ್ಲ : ಸಿಡಿಲು ಬಡಿದು ಮೂವರಿಗೆ ಗಾಯ , ಮನೆಗೆ ಹಾನಿ

07:54 PM Jul 07, 2021 | Team Udayavani |

ವಿಟ್ಲ : ವೀರಕಂಬ ಗ್ರಾಮದ ಕಲ್ಮಲೆಯಲ್ಲಿ ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡು ಮನೆಗೆ ಭಾಗಶಃ ಹಾನಿಯಾದ ಘಟನೆ ಸಂಭವಿಸಿದೆ.

Advertisement

ರಘುನಾಥ ಶೆಟ್ಟಿ ಅವರ ಮಕ್ಕಳಾದ ಪ್ರಜೀತಾ(19) ಮತ್ತು ರಕ್ಷಿತಾ(24) ಅವರಯ ಗಾಯಗೊಂಡಿದ್ದು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೀರಕಂಬ ಕಲ್ಮಲೆ ಜಯಂತಿ ಮತ್ತು ರಘುನಾಥ ಶೆಟ್ಟಿ ದಂಪತಿಗಳ ಮನೆಗೆ ಸಂಜೆ ಭಾರೀ ಸಿಡಿಲು ಬಡಿದಿದೆ. ಇದರಿಂದ ಮನೆ ಭಾಗಶಃ ಹಾನಿಗೊಂಡಿದೆ. ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು ಸಂಪೂರ್ಣವಾಗಿ ನಾಶಗೊಂಡಿದೆ. ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಮಾಡಿನ ಹಂಚುಗಳು ಪುಡಿಯಾಗಿ ಬಿದ್ದಿವೆ.

ಇದನ್ನೂ ಓದಿ :ಮೋದಿ ಸಂಪುಟ ಪುನರ್ ರಚನೆ : ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕಂರಂದ್ಲಾಜೆ ಪ್ರಮಾಣ ವಚನ

ಸ್ಥಳಕ್ಕೆ ವೀರಕಂಬ ಗ್ರಾಮಕರಣಿಕ ಕರಿಬಸಪ್ಪ ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next