Advertisement

ದಿ|ಶರತ್‌ ಮನೆಗೆ ನಳಿನ್‌ ಕುಮಾರ್‌ ಕಟೀಲು ಭೇಟಿ

03:18 PM Apr 10, 2019 | mahesh |

ಬಂಟ್ವಾಳ: ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಅವರು ಆರ್‌.ಎಸ್‌.ಎಸ್‌. ಕಾರ್ಯಕರ್ತ ದಿ| ಶರತ್‌ ಮಡಿವಾಳ ನಿವಾಸಕ್ಕೆ ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಸೋಮವಾರ ಭೇಟಿ ನೀಡಿ, ಶರತ್‌ ತಂದೆ, ತಾಯಿಯವರ ಆಶೀರ್ವಾದ ಪಡೆದು, ಆರೋಗ್ಯವನ್ನು ವಿಚಾರಿಸಿದರು.

Advertisement

ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಜಿಲ್ಲಾ ಉಪಾಧ್ಯಕ್ಷರಾದ ರವಿಶಂಕರ್‌ ಮಿಜಾರ್‌, ಜಿ. ಆನಂದ, ಜಿಲ್ಲಾ ವಕ್ತಾರರಾದ ಕೆ. ಹರಿಕೃಷ್ಣ ಬಂಟ್ವಾಳ, ಜೀತೆಂದ್ರ ಎಸ್‌. ಕೊಟ್ಟಾರಿ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನ ಜಿ.ಕೆ. ಭಟ್‌, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ , ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್‌ ಬಂಟ್ವಾಳ, ಮೋನಪ್ಪ ದೇವಸ್ಯ, ಉಪಾಧ್ಯಕ್ಷರಾದ ಶ್ರೀಕಾಂತ್‌ ಶೆಟ್ಟಿ , ಗಣೇಶ್‌ ರೈ ಮಾಣಿ, ಸಚ್ಚಿದಾನಂದ ಶೆಟ್ಟಿ ಮುಂಬೈ ಹಾಗೂ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಬಳಿಕ ಸಜೀಪಮೂಡ ಪರಿಸರದಲ್ಲಿ ಮತ ಯಾಚಿಸಿದರು. ಕಡೇಶ್ವಾಲ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಕಡೇಶ್ವಾಲ್ಯದ ಕ್ಯಾಶ್ಯೂ ಕಾರ್ಖಾನೆ, ಕೆ. ಸೇಸಪ್ಪ ಕೋಟ್ಯಾನ್‌ ಪಚ್ಚಿನಡ್ಕ ಅವರ ಬೀಡಿ ಉದ್ಯಮಕ್ಕೆ ಭೇಟಿ ನೀಡಿ ಕಾರ್ಮಿಕರಲ್ಲಿ, ಬಡಗಬೆಳ್ಳೂರು, ಅಮ್ಮುಂಜೆ ಪರಿಸರದಲ್ಲಿ ಮತಯಾಚಿಸಿದರು. ಈ ಸಂದರ್ಭ ಪಕ್ಷದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next