Advertisement

ಕುಮಾರಸ್ವಾಮಿ ಸೌತಡ್ಕ ಭೇಟಿ

03:35 AM Jun 29, 2017 | Team Udayavani |

ನೆಲ್ಯಾಡಿ: ಜೆಡಿಎಸ್‌ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮಂಗಳವಾರ  ಕೊಕ್ಕಡದ ಬಯಲು ಆಲಯದ ಗಣೇಶನ ಕ್ಷೇತ್ರ ಶ್ರೀ ಸೌತಡ್ಕಕ್ಕೆ ಭೇಟಿ ನೀಡಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿದರು. 

Advertisement

ಈ ಸಂದರ್ಭ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ ಮಾಜಿ ಮುಖ್ಯ ಮಂತ್ರಿಯವರನ್ನು ಶಾಲು ಹೊದೆಸಿ ಗೌರವಿಸಿದರು.  ಸೌತಡ್ಕ ದೇಗುಲದ ಆಡಳಿತಾಧಿಕಾರಿ ಹರಿಶ್ಚಂದ್ರ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾ ಧಿಕಾರಿ  ಡಾ| ಜಯಕೀರ್ತಿ ಜೈನ್‌, ರಾಜ್ಯ ವಕೀಲರ ಪರಿಷತ್‌ ಸದಸ್ಯ ಬೋಜೇ ಗೌಡ ಚಿಕ್ಕಮಗಳೂರು, ಬೆಳ್ತಂಗಡಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಪ್ರವೀಣ್‌ ಚಂದ್ರ ಜೈನ್‌, ಜೆಡಿಎಸ್‌ ಪ್ರಮುಖರಾದ ಅಡಾRಡಿ ಜಗನ್ನಾಥ ಗೌಡ, ಶ್ರೀನಿವಾಸ ಗೌಡ ಪಟ್ರಮೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ಪಿ. ವಿಶ್ವನಾಥ ಶೆಟ್ಟಿ , ಪ್ರಶಾಂತ ರೈ ಅರಂತಬೈಲು ಮತ್ತಿತರರು ಉಪಸ್ಥಿತರಿದ್ದರು. 

ದೇಗುಲದ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಶ್ರೀ ದೇವರಿಗೆ ಸೇವಾ ಪೂಜೆ  ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next