Advertisement

ಸೋಮಶೇಖರ್ ನೀನು ಬೇಕಾದರೆ ಯಡಿಯೂರಪ್ಪನವರ ಪಾದ ನೆಕ್ಕು : ಎಚ್. ವಿಶ್ವನಾಥ್

07:47 PM Jul 05, 2021 | Team Udayavani |

ಬೆಂಗಳೂರು : ಯಡಿಯೂರಪ್ಪ ವಿರುದ್ದ ಮಾತನಾಡುವವರು ಅವರ ಧೂಳಿಗೂ ಸಮರಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಎಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

Advertisement

ಸೋಮಶೇಖರ್ ನೀನು ಬೇಕಾದರೆ ಯಡಿಯೂರಪ್ಪ ಪಾದ ನೆಕ್ಕು, ಅವರ ಮಗನ ಭ್ರಷ್ಟಾಚಾರ ಅವ್ಯವಹಾರ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವಾ ?, ರಾಜ್ಯದಲ್ಲಿ 104 ಸ್ಥಾನ ಬಂದಿದ್ದ ಯಡಿಯೂರಪ್ಪರಿಂದ ಅಲ್ಲ. 25 ಸಂಸದರು ಗೆದ್ದಿದ್ದು ಯಡಿಯೂರಪ್ಪರಿಂದ ಅಲ್ಲ.ಇದು ಆಗಿದ್ದು ಪ್ರಧಾನಿ ನರೇಂದ್ರ ಮೋದಿಯವರಿಂದ ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಮೋದಿ ಹೆಸರನ್ನು ಯಡಿಯೂರಪ್ಪ ಮರೆಸಿದ್ದಾರೆ. ಸಿಎಂ ಬದಲಾಗಲೇ ಬೇಕು. ಇದರ ಪ್ರಕ್ರಿಯೆ ನಡೆದಿದ್ದು, ಫಲ ಬರುವುದು ತಡವಾಗಬಹುದು. ಆದರೆ ಖಂಡಿತಾ ಬದಲಾವಣೆ ಆಗಲಿದೆ ಎಂದು ಮೈಸೂರಿನಲ್ಲಿ ಎಂ.ಎಲ್.ಸಿ ಎಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next