Advertisement

  ವಿಷಕನ್ಯೆಯರೂ ಹಾಗೂ ತುಕ್ಕು ಹಿಡಿಸುವ ಪುರುಷ ಪುಂಗವರೂ….

11:52 AM Jul 22, 2017 | |

ಬದುಕು ಪ್ರತಿಹಂತದಲ್ಲೂ (ವಿಸ್ಮಯಗಳಿಂದ ಕೂಡಿದ, ತಲ್ಲಣಗಳಿಂದ ಕೂಡಿದ ಸಂತೋಷಗಳ ಹೊರತಾಗಿ, ಬೇರೇನೂ ಇರದ ಸಂತೋಷ ಕಳಕೊಂಡರೆ ಬರೀ ನೋವಿನ ಸುರಿಮಳೆಯೇ ಸುರಿಯುವ ಇತ್ಯಾದಿ ಇತ್ಯಾದಿ) ಯಾವ ಸಮಯದಲ್ಲಿ ಬದಲಾಗಿ ನಿಂತುಕೊಳ್ಳಬಹುದಾದ ಹೀಗೆ ಎಂಬುದಿಲ್ಲ. ಕೊನೆಗೂ ಕಾಣದ ಕೈಯೊಂದು ಇಂಥ ಈ ಅದೃಷ್ಟ, ದುರಾದೃಷ್ಟಗಳನ್ನು ಒದಗಿಸುತ್ತ ಹೋಗುತ್ತದೆ ಎಂಬುದು ನಮ್ಮ ನಂಬಿಕೆ. ಅವರೂ ನಾವು ಒಳಿತುಗಳು ಬಂದೇ ಬರುತ್ತದೆ ಎಂಬ ನಂಬಿಕೆಯೊಡನೆ ಮುಂದೆ ಸಾಗುತ್ತೇವೆ. ಕಾಣದ ಶಕ್ತಿಯ ಬಳಿ ಪ್ರಾರ್ಥನೆಯ ಮೂಲಕ ಒಳಿತನ್ನು ನೀಡು ಎಂದು ಕೇಳಿಕೊಳ್ಳುತ್ತೇವೆ. ಏನು ಹಾಗಾದರೆ ಈ ಒಳಿತು ಕೆಡಕುಗಳ ಮರ್ಮ? ಹಲವು ತೆರೆನಾದ ಈ ಮರ್ಮ ಒಬ್ಬ ವ್ಯಕ್ತಿಗೇ ಏಕೆ ಸದಾ ವರ್ಚಸ್ಸು ತುಂಬಿರುತ್ತದೆ? ಒಬ್ಬ ಮಾತಿನ ಮಾಂತ್ರಿಕ ನಾಗುತ್ತಾನೆ. ಮಗದೊಬ್ಬ ವ್ಯಕ್ತಿ ದೈರ್ಯದಿಂದ ಮುನ್ನುಗ್ಗುತ್ತಾನೆ. ಇನ್ನೂ ಒಬ್ಬ ಸುಖದಲ್ಲಿಯೇ ತೇಲಾಡಿಕೊಂಡಿರುತ್ತಾನೆ. ಇದನ್ನೆಲ್ಲಾ ಒಂದೇ ಏಟಿಗೆ ಉತ್ತರಿಸುವುದು ಕಷ್ಟ. ಹೀಗಾಗಿ ಹೆಣ್ಣು ಗಂಡುಗಳು ಬಾಳಪಥವ ಕೂಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಧರ್ಮ, ಅರ್ಥ, ಕಾಮ, ಮೋಕ್ಷಗಳು ದಾಂಪತ್ಯದ ಮೂಲಕವೇ ಸಿಗಬೇಕು.  ಆದರೆ ಎಷ್ಟು ದಾಂಪತ್ಯಗಳು ಅನ್ಯೋನ್ಯವಾಗಿರುತ್ತವೆ? ಪೂರ್ತಿ ಹೊಂದಾಣಿಕೆ ಇರಲಿ,  ಏನೇನೂ ಹೊಂದಾಣಿಕೆ ಇರದೆ ಇದ್ದರೂ ಶ್ರೇಷ್ಠ ಹೊಂದಾಣಿಕೆ ಎಂದು ಅನಿಸದು.  ಹೊಂದಿಕೊಂಡು ಹೋಗಬೇಕಿದೆ ಎಂಬುದಕ್ಕಾಗಿ ನಾಟಕವಾಡುತ್ತಾ ಹೊಂದಿಕೊಂಡು ಹೋಗುವ ಇತ್ಯಾದಿ ಎಷ್ಟೋ ಬಗೆಯಲ್ಲಿ ದಾಂಪತ್ಯಗಳು ನರಳುತ್ತಿರುತ್ತವೆ. ಸಂತೋಷದ ದಾಂಪತ್ಯ ಇಲ್ಲ ಎಂದೇನೂ ಅಲ್ಲ. 

Advertisement

ತುಕ್ಕು ಹಿಡಿಸುವ ಪುರುಷ ಪುಂಗವರು
 ದುಷ್ಟ ಪುರುಷರು ಸದಾ ಇದ್ದೇ ಇರುತ್ತಾರೆ. ಹೀಗೆಂದ ಮಾತ್ರಕ್ಕೆ ಒಳ್ಳೆಯ ಜನ ಅಪರೂಪವಲ್ಲ. ತುಕ್ಕು ಹಿಡಿಸುವ ಪುರುಷ ಪುಂಗವರು ಎಂದರೆ ತನ್ನನ್ನು ನಂಬಿದ ಹೆಣ್ಣುಮಕ್ಕಳಿಗೆ ತೊಂದರೆಯನ್ನೇ ತರುವವರು. ಹೆಣ್ಣುಗಳನ್ನು ಬೆನ್ನು ಹತ್ತುತ್ತಾರೆ. ಹೇಗೋ ಕಾಡಿಸುತ್ತಾರೆ. ಸುಲಭವಾಗಿ ಕೈವಶ ಮಾಡಿಕೊಳ್ಳುತ್ತಾರೆ. ಮರುಳು ಮಾಡುವುದು ಇವರ ಹುಟ್ಟುಗುಣ. ಇವರು ಬಲಾತ್ಕಾರವಾಗಿ ತಮಗೆ ಬೇಕಾದವರನ್ನು ಶತಾಯ ಗಂತಾಯ ಹಿಡಿದು ಭೋಗಿಸುತ್ತಾರೆ. ಪರಿಸ್ಥಿತಿ ಹತೋಟಿ ತಪ್ಪಿದರೆ ಸಾಯಿಸುತ್ತಾರೆ. ಇನ್ನೂ ಕೆಲವರು ಪ್ರವೇಶಿಸಿದ ಹೆಣ್ಣುಗಳ ಬಾಳು ಕಣ್ಣೀರಿನ ಕಥೆಯೇ ಆಗುತ್ತದೆ. ಇದು ನಮ್ಮ ದೇಶ ಎಂದಲ್ಲ ಪ್ರಪಂಚದಾದ್ಯಂತ ಇಂಥವರಿಗೆ ಅದೃಷ್ಟ ಹೀನ ಮಹಿಳಾಮಣಿಗಳನ್ನು ಗಂಟು ಹಾಕುತ್ತದೆ.

ಒಬ್ಬ ಪುರುಷ ಈತ ಅಂತಾರಾಷ್ಟ್ರೀಯ ಕೇಡಿ. ಬಹು ಸುಂದರಾಂಗ. ಇವನ ಜನನದ ವೇಳೆಯ ಮುಖ್ಯ ಅಧಿಪತಿ ಬುಧ. ಬುಧನ ಅನುಪಮ ಶಕ್ತಿ ದಕ್ಕಿದಾಗ ಸುಂದರವಾದ ವ್ಯಕ್ತಿತ್ವ ಪ್ರಧಾನವಾಗುತ್ತದೆ. ಉತ್ಪಾತರೂಪಿ ಎಂದೂ ಇವನನ್ನು ನಮ್ಮ ಗ್ರಂಥಗಳು ಉದ್ದರಿಸುತ್ತದೆ. ರೂಪದಲ್ಲಿ ಬುಧನು ಅಪ್ರತಿಮನಾಗಿದ್ದಾನೆ.  ಈಗ ಉಲ್ಲೇಖೀಸುತ್ತಿರುವ ಕೇಡಿಯು ಅನುಪಮತೆಯನ್ನು ಬುಧನ ಕಾರಣದಿಂದಾಗಿಯೇ ಪಡೆದುರುತ್ತಾನೆ. ಇವನ ಜಾತಕದಲ್ಲಿ ಸುಂದರ ರೂಪ ಪ್ರಧಾನವಾದ ಆಯುಧವಾಗಿದೆ. ಜೊತೆಗೆ ದಿಕಾ³ಲ ಪಡೆದ ಸೂರ್ಯನ ಕಾರಣದಿಂದಾಗಿ ಹುಡುಗಿಯರ ಸಂಬಂಧ  ನವ ಗ್ರಹಗಳನ್ನು ಒದಗಿಸುವ ವರ್ತಮಾನ ಉಂಟಾಗುತ್ತಿರುತ್ತದೆ. ಆದರೆ ಸೂರ್ಯನ, ಶುಕ್ರನ ಸಂಬಂಧ ದುಷ್ಟ ರಾಕ್ಷಸ ಮನೋಭಾವ ಒದಗಿರುವುದರಿಂದ ಹತ್ತಿರಬಂದ ಹುಡುಗಿಯರನ್ನು ದೈಹಿಕವಾಗಿ ಉಪಯೋಗಿಸಿಕೊಂಡು ನಂತರ ಹಣ ದೋಚಿ ಪ್ರತಿಭಟನೆ ಎದುರಾದಾಗ ಕೊಂದು ಬಿಸಾಡುವ ಹೀನತನ ನೀಡಿದೆ.  ಲೈಂಗಿಕ ತೃಷೆ, ಕಳ್ಳತನ, ಕೊಲೆ ಇತ್ಯಾದಿಗಳು ಮೋಹಕ ರೂಪದ ಒಳಗೆ ಕಾಣಲು ಸಾಧ್ಯವಾಗದ ವಿಷಯ. 

ಅಂತಾರಾಷ್ಟ್ರೀಯ ಕುಖ್ಯಾತಿ. ಸದಾ ಜಗಳವಾಡುತ್ತಿದ್ದ ತಂದೆ ತಾಯಿ- ಮಗ. ಭಿನ್ನ ಸಂಸ್ಕೃತಿ ಖಂಡಾಂತರಗಳ ದೂರದ ದೇಶದ ಹೆಣ್ಣು, ಗಂಡುಗಳು ಪ್ರೀತಿಸಿ ಮದುವೆಯಾಗಿ ಪಡೆದ ಈ ಮಗು ಶುದ್ಧ ರಾಕ್ಷಸನಾದ. ಇವನ ಸಹವಾಸಕ್ಕೆ ಬಂದ ಯಾವ ಹೆಣ್ಣುಗಳೂ ಒಂದು ಉತ್ತಮ ಸ್ಥಿತಿಗತಿ ಪಡೆಯಲಿಲ್ಲ. ಎಷ್ಟೇ ದೋಚಿದರೂ ಇವನೂ ಉದ್ಧಾರವಾಗಲಿಲ್ಲ/ ಪೊಲೀಸರು ಸದಾ ಬೆನ್ನಟ್ಟಿದರು. ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿದ. ತಾನು ಯಾರನ್ನು ಕೊಂದನೋ ಕೊಲೆಗೆ ಬೇಕಾದ ಸಾಕ್ಷಿಯನ್ನು ಚೂರು ಉಳಿಸದೆ ಗಲ್ಲು ಶಿಕ್ಷೆ ತಪ್ಪಿಸಿಕೊಂಡ. ತನ್ನ ಕೇಸುಗಳನ್ನು ತಾನೇ ವಾದಿಸಿ ಸಮರ್ಥಿಸಿಕೊಳ್ಳುವ ಕಾಯ್ದೆ ಕಾನೂನುಗಳ ಪರಿಣಿತ. ಯಾವ ದೇಶದ ಯಾವ ಕಾಯ್ದೆಗಳನ್ನು ಅರೆದು ಕುಡಿದು ಹಸ್ತಗತ ಮಾಡಿಕೊಂಡ ಮಹಾನ್‌ ಚತುರ. ಜೀವನದ ನಾಲ್ಕು ದಶಕಗಳ ಕಾಲ ಜೈಲಿನಲ್ಲೇ ಕಳೆದ. ಗಲ್ಲು ತಪ್ಪಿದರೂ ಜೈಲು ತಪ್ಪಲಿಲ್ಲ. ಆದರೆ ಅರಳ ಬೇಕಾದ ಮಹಿಳೆಯರ ಪಾಳಿಗೆ ಶಾಶ್ವತವಾದ ತುಕ್ಕು ಹಿಡಿಸಿ ಕಾಡಿದ. ಚೆಂಡಾಡಿದ ತಣ್ಣಗಿನ ಕ್ರೌರ್ಯ, ಕುಜ ದೋಷ ವ್ಯಕ್ತಿತ್ವಕ್ಕೆ ರಾಕ್ಷಸತ್ವ ನೀಡಿ ಮೆರೆಸಿತು. ಮನೋಹರ ರೂಪವನ್ನು ಬುಧ ನೀಡಿದ. ಬುದ್ಧಿ ಬಲ ಸೂರ್ಯನಿಂದ. ಭೋಗ ಶುಕ್ರನ ಶಕ್ತಿಯ ಕಾರಣದಿಂದ. ಆದರೆ ಏನು ಪ್ರಯೋಜನ? 

ಹತ್ತಿರ ಬಂದವರವನ್ನೆಲ್ಲ ನಿಷ್ಕ್ರಿಯಗೊಳಿಸಿದ ವಿಷಕನ್ಯೆ 
ಮೇಲಿನ ವಿವರ ಪುರುಷನದ್ದಾದರೆ ಈಗ ವಿಷಕನ್ಯೆಯ ಚಿತ್ರ. ವ್ಯಕ್ತಿತ್ವವನ್ನು ಎತ್ತರಕ್ಕೇರಿಸುವ ಅಂಗಾರಕನಿದ್ದರೂ, ಸದಾ ರಾಹು ಕಕ್ಕಿದ ವಿಷ ಪೀಡಿತನಾಗಿ ಸುಂದರಿಯಾದರೂ ಹತ್ತಿರ ಬಂದ ಪುರುಷರು ನಿರ್ವೀಯ್ಯìಗೊಳ್ಳುತ್ತಿದ್ದರು. ಕೇತು ದೋಷ ರಾಹು ನಕ್ಷತ್ರದಲ್ಲಿ ಪುರುಷರನ್ನು ಸೆಳೆದು, ಅವರ ಬಾಹು ಬಂಧನದಲ್ಲಿ ನಿರಂತರವಾದ ಸುಖ ಪಡೆಯುವ ಅದಮ್ಯ ಉತ್ಸಾಹದ ಹೆಣ್ಣು ಇವಳು. ಆದರೆ ಸುಖದ ಯಜಮಾನ ಮರಣದ ಮನೆಯಲ್ಲಿ ಬಲಿಷ್ಟನಾಗಿ ಒಂದಲ್ಲಾ ಒಂದು ಪುರುಷ ಜೀವನವನ್ನು ಪ್ರವೇಶಿಸುತ್ತಿದ್ದ. ಇವಳ ತೆಕ್ಕೆಗೆ ಬಂದ ಪುರುಷ ಸುಖಮಯವಾಗಿ ಬಾಳುವುದು ಕಷ್ಟವೇ ಆಗುತ್ತಿತ್ತು. ಒಂದಲ,É ಎರಡಲ್ಲ ಹದಿನೇಳು ಪುರುಷರು ಇವಳ ಲಾವಣ್ಯಕ್ಕೆ ಸೋತು ಬಂದವರು. ಸತ್ತವರೂ ಇದ್ದಾರೆ. ನೇಣು ಬಿಗಿದು ಜೀವನದ ಯಾತ್ರೆ ಮುಗಿಸಿದವರು, ಜೈಲು ಶೀಕ್ಷೆ ಅನುಭವಿಸಿದವರೂ ಇದ್ದಾರೆ. ಜೀವನವಿಡೀ ದಿವಾಳಿತನ ಅನಾರೋಗ್ಯ ಅತಿರೇಕದಲ್ಲೀ ಬದುಕು ಕಳೆದವರಿದ್ದಾರೆ. 

Advertisement

ಹಾಗಾದರೆ ಈ ವಿಷಕನ್ಯೆಯ ತೆಕ್ಕೆಗೆ ಬಂದವರಿಗೇಕೆ ಈ ಬಾಧೆ? 
ಕುಜದೋಷ ಸರ್ಪಭಾದೆ ಕೇತು ತೊಡಕು ಗುರು ಯಾತನೆಗಳಲ್ಲಿ ಸಿಕ್ಕಿ ಬಿದ್ದ ಇವಳು ಆತ್ಮಹತ್ಯೆಗೆ ಯತ್ನಿಸಿದ್ದುಂಟು. ಪ್ರಬಲನಾದ ಗುರು ಜೀವನ ಸಾರ್ಥಕತೆಯನ್ನು ಸೂರ್ಯನ ಮೂಲಕ ಒದಗಿಸಿದರೂ ಅಂತರಂಗದಲ್ಲಿ ಪರಿಪೂರ್ಣತೆ ಪಡೆಯಲು ಸಾಧ್ಯವಾಗದ ತಳಮಳದಲ್ಲೇ ಪ್ರತಿದಿನವೂ ಚಡಪಡಿಸಿದಳು. ತಂದೆ ತಾಯಂದಿರ ವಿಷಮ ಸಂಬಂಧದ ಫ‌ಲವಾದ ಮಗಳು ಒಂದು ಸಮತೋಲನ ಪಡೆಯದೆ ನರಳಿದಳು. ಗಂಡಸರನ್ನು ಕಣ್ಣಲ್ಲಿ ಕಾಡಿ ಎದೆಗೊರಗಿಸಿಕೊಂಡಳು. ಎದೆಗೊರಗಿದವಳು ಅಸಮತೋಲನ ಪಡೆದರು. ಜೀವನದಲ್ಲಿ ಎಡವಿದರು ದಿವಾಳಿಯಾದರು. ಸತ್ತರು. ಬದುಕಿದ್ದರೂ ಸತ್ತಂತೆಯೇ ಇದ್ದರು.

ಬದುಕಿನ ಭಾಗ್ಯ ಏಕೆ ಸುವ್ಯವಸ್ಥಿತವಾಗದು
ಬದುಕೇ ಹೀಗೆ ಎಂದುಕೊಳ್ಳುವ ಹಾಗೆ ಆಗುತ್ತಿರುತ್ತದೆ. ಈ ಎರಡೂ ಮೇಲಿನ ಚಿತ್ರಗಳು ಎಲ್ಲಾ ಇದ್ದೂ, ಎಲ್ಲವನ್ನೂ ಕಳೆದುಕೊಂಡವರ ಚಿತ್ರಗಳು. ಎಲ್ಲಾ ಇದ್ದವರನ್ನು ಏನೂ ಇರದಂತೆ ಮರುಭೂಮಿಯಾಗಿಸಿದವರ ಚಿತ್ರಗಳು. ಇದು ವಿಧಿ ಲೀಲೆಯೇ? ಪುರುಷ ಪ್ರಯತ್ನಕ್ಕೆ ಬೆಲೆಯೇ ಇಲ್ಲವೋ? ಪುರುಷ ಪ್ರಯತ್ನಕ್ಕೆ ಬೇಕಾದ ಯಶಸ್ಸು ಸಿಗಲೂ ಕೂಡಾ ಗ್ರಹಗತಿಗಳು ನಮ್ಮ ಬೆಂಬಲಕ್ಕೆ ಬರಬೇಕು. ಅವನೊಲಿದರೆ ಎಲ್ಲವೂ ಲಭ್ಯ. ಒಲಿಯದಿದ್ದರೆ ನಮ್ಮ ಜೀವನದ ಕೇಂದ್ರ ಬಿಸಿಯಾಗಿ ಭುಸುಗುಡುವ ಕಾವಲಿಯಾಗುತ್ತದೆ. ನಿರಂತರ ನೋವಿನ ಜಾÌಲಾಮುಖೀಯಾಗುತ್ತದೆ. ಹಾಗಾಗಿ ನಮ್ಮನ್ನು ಮೀರಿದ ಒಂದು ಶಕ್ತಿಯ ಎದುರು ಶರಣಾಗಬೇಕು. ಶರಣಾದವರನ್ನು ಬಿಡದ ಶಕ್ತಿ ಕರುಣೆಯಿಂದ ಕಾಪಾಡುವ ದೈವಕ್ಕೆ ಇದ್ದೇ ಇದೆ. 

ಅನಂತ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next