Advertisement

ಜಿಲ್ಲಾಡಳಿತದ ಎಚ್ಚರಿಕೆ ನಡುವೆಯೂ ವಿರೂಪಾಪೂರಗಡ್ಡಿ ರೆಸಾರ್ಟ್ ಗಳು ಬುಕ್

09:57 AM Oct 27, 2019 | sudhir |

ಗಂಗಾವತಿ: ಜಿಲ್ಲಾಡಳಿತದ ಮುನ್ನೆಚ್ಚರಿಕೆ ಮಧ್ಯೆದಲ್ಲಿಯೂ ತಾಲ್ಲೂಕಿನ ವಿರೂಪಾಪೂರಗಡ್ಡಿ ರೆಸಾರ್ಟ್ ಗಳಲ್ಲಿ ರೂಂಗಳು ಬುಕ್ ಆಗಿವೆ. ಈ ಮಧ್ಯೆ ತುಂಗಭದ್ರಾ ಡ್ಯಾಂ ಒಳಹರಿವು ಹೆಚ್ಚಾಗಿದ್ದು ನದಿಗೆ ಶನಿವಾರ ರಾತ್ರಿ 50ಸಾವಿರ ಕ್ಯೂಸೆಕ್ಸ್ ನೀರು ಬಿಡುವ ಸಾಧ್ಯತೆ ಇದ್ದು ಪ್ರವಾಸಿಗರನ್ನು ವಾಪಸ್ ಕಳುಹಿಸುವಂತೆ ವಿರೂಪಾಪೂರಗಡ್ಡಿ ಸುತ್ತಲಿನ ಗ್ರಾಮಗಳಲ್ಲಿ ತಾಲೂಕು ಆಡಳಿತದಿಂದ ಡಂಗೂರ ಹಾಕಿ ಮುನ್ನೆಚ್ಚರಿಕೆ ನೀಡಿದ್ದಾರೆ.

Advertisement

ಡಂಗೂರ ಹಾಕಿದ ನಂತರ ಕೆಲ ಪ್ರವಾಸಿಗರು ಸ್ವಯಂ ಪ್ರೇರಣೆಯಿಂದ ರೂಂಗಳನ್ನು ಖಾಲಿ ಮಾಡಿದ್ದಾರೆ. ವಿರೂಪಾಪೂರಗಡ್ಡಿಯಲ್ಲಿರುವ ರೆಸಾರ್ಟ್ ಗಳ ಪೈಕಿ ಲಕ್ಷ್ಮಿ ಗೋಲ್ಡನ್ ಬೀಚ್,ಸಾಯಿಪ್ಲಾಜಾ ಹಾಗೂ ಶಾಂತಿಗೆಸ್ಟ್ ಸೇರಿ ಕೆಲವು ರೆಸಾರ್ಟ್ ಗಳು ಮುಚ್ಚಿದ್ದು ಬಹುತೇಕ ರೆಸಾರ್ಟ್ ಗಳು ಆರಂಭವಾಗಿ ವ್ಯವಹಾರ ನಡೆಸಿವೆ.

ಮುನ್ನೆಚ್ಚರಿಕೆ: ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಇರುವುದರಿಂದ ವಿರೂಪಾಪೂರಗಡ್ಡಿ ಹಾಗೂ ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರ ಹಾಕಲಾಗಿದೆ ಎಂದು ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ಉದಯವಾಣಿ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next