Advertisement
“ನೋಡಿ… ನನಗೆ ಕೋಚ್ ಹುದ್ದೆ ಏಕೆ ಸಿಗಲಿಲ್ಲವೆಂದರೆ ನಾನು ಕೋಚ್ ಆಯ್ಕೆಗಾರರ ಜತೆ ಯಾವುದೇ ಸೆಟ್ಟಿಂಗ್ ಮಾಡಿಕೊಳ್ಳಲಿಲ್ಲ’ ಎಂದು ಡ್ಯಾಶಿಂಗ್ ಓಪನರ್ ಖ್ಯಾತಿಯ ವೀರೇಂದ್ರ ಸೆಹವಾಗ್ “ಇಂಡಿಯಾ ಟಿವಿ’ ಜತೆ ನಡೆಸಿದ ಸಂದರ್ಶನವೊಂದರಲ್ಲಿ ಮಾರ್ಮಿಕವಾಗಿ ಹೇಳಿದರು.
ಈ ಸಂದರ್ಭದಲ್ಲಿ ಸೆಹವಾಗ್ ಇನ್ನೂ ಒಂದು ವಿಷಯವನ್ನು ಸ್ಪಷ್ಟಪಡಿಸಿದರು. ಅರ್ಜಿ ಸಲ್ಲಿಸುವ ಮೊದಲು ವಿರಾಟ್ ಕೊಹ್ಲಿ ಜತೆ ಮಾತನಾಡಿದ್ದಾಗಿಯೂ ತಿಳಿಸಿದರು.
Related Articles
Advertisement
ಮತ್ತೆ ತಪ್ಪು ಮಾಡಲಾರೆ ಎಂದಿದ್ದ ರವಿಶಾಸ್ತ್ರಿಈ ಸಂದರ್ಭದಲ್ಲಿ ರವಿಶಾಸ್ತ್ರಿ ಜತೆ ನಡೆಸಿದ ಮಾತುಕತೆಯನ್ನೂ ಸೆಹವಾಗ್ ಬಿಚ್ಚಿಟ್ಟಿದ್ದಾರೆ.”ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೇಳೆ ಇಂಗ್ಲೆಂಡ್ನಲ್ಲಿದ್ದ ನಾನು ರವಿಶಾಸ್ತ್ರಿ ಜತೆಯೂ ಮಾತಾಡಿದ್ದೆ. ನೀವೇಕೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಕೇಳಿದ್ದೆ. ಆಗ ಅವರು, ಒಮ್ಮೆ ತಾನು ತಪ್ಪು ಮಾಡಿ ಆಗಿದೆ, ಇದನ್ನು ಪುನರಾವರ್ತಿಸಲು ಬಯಸುವುದಿಲ್ಲ ಎಂದರು. ಅಕಸ್ಮಾತ್ ರವಿಶಾಸ್ತ್ರಿ ಮೊದಲೇ ಅರ್ಜಿ ಸಲ್ಲಿಸಿದ್ದರೆ ನಾನು ಖಂಡಿತ ಮುಂದುವರಿಯುತ್ತಿರಲಿಲ್ಲ…’ ಎಂಬುದಾಗಿ ಸೆಹವಾಗ್ ಹೇಳಿದರು. “ಅವರು ನನ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ, ಹೀಗಾಗಿ ಅವರ ಮಾತನ್ನು ಪಾಲಿಸಿ ಸಹಾಯ ಮಾಡೋಣ ಎನಿಸಿತು. ಆದರೆ ನಾನಾಗಿ ಯಾವತ್ತೂ ಕೋಚ್ ಹುದ್ದೆಗೆ ಮುಂದಾಗುತ್ತಿರಲಿಲ್ಲ. ಭವಿಷ್ಯದಲ್ಲೂ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ…’ ಎಂದರು ಸೆಹವಾಗ್.