Advertisement
ಕಾಡುಪ್ರಾಣಿಗಳಿಂದ ಬೆಳೆ, ಸ್ವರಕ್ಷಣೆ ಗಾಗಿ ನಾವು ಹೊಂದಿರುವ ಕೋವಿಗಳನ್ನು ಪೊಲೀಸರು ಠೇವಣಿ ಇರಿಸಿ ಕೊಂಡಿರುವುದರಿಂದ ಈಗ ಪೊಲೀಸರೇ ನಮಗೆ ರಕ್ಷಣೆ ಒದಗಿಸ ಬೇಕು ಎಂಬುದು ಕೃಷಿಕರ ವಾದ. ಈ ನಿಟ್ಟಿನಲ್ಲಿ ಪುತ್ತೂರು ಭಾಗದ ಕೃಷಿಕರು ಈಗಾಗಲೇ ಅಭಿಯಾನ ಆರಂಭಿಸಿದ್ದಾರೆ. ಜತೆಗೆ ಈಗಾಗಲೇ ಹಲವಾರು ಕರೆಗಳು ಪೊಲೀಸರ ಸಹಾಯವಾಣಿಗೆ ಹೋಗಿವೆ.
Related Articles
Advertisement
ಪೊಲೀಸರೇ ಕೋವಿ ಮನೆಗೆ ತಲುಪಿಸಿದರು!ಈ ನಡುವೆ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಲಾಗಿದ್ದ ಕೋವಿಯನ್ನು ಪೊಲೀಸರೇ ಕೃಷಿಕರೊಬ್ಬರ ಮನೆಗೆ ತಲುಪಿಸಬೇಕಾಗಿ ಬಂದ ಘಟನೆಯೂ ನಡೆದಿದೆ. ನ್ಯಾಯಾಲಯಕ್ಕೆ ಹೋಗಿ ತನಗೆ ಕೋವಿಯ ಅನಿವಾರ್ಯವನ್ನು ಮನವರಿಕೆ ಮಾಡಿ ಅನುಮತಿ ಪಡೆದ ವ್ಯಕ್ತಿಯೊಬ್ಬರಿಗೆ ಪೊಲೀಸರೇ ಕೋವಿಯನ್ನು ಮನೆಗೆ ತಲುಪಿಸಿದ್ದಾರೆ. ಕೋವಿಯನ್ನು ಸಾರ್ವ ಜನಿಕವಾಗಿ ಪ್ರದರ್ಶನ ಮಾಡಬಾರದು ಎಂಬ ಷರತ್ತನ್ನು ಕೋವಿ ಠೇವಣಿಯಿಂದ ಕೃಷಿಕರಿಗೆ ವಿನಾಯಿತಿ ನೀಡುವ ನಿಯಮದಲ್ಲಿ ನಮೂದಿಸಿರುವುದೇ ಇದಕ್ಕೆ ಕಾರಣ. ನಾವು ಠಾಣೆಗೆ ಹೋಗಿ
ಕೋವಿ ಪಡೆದು ಮನೆಗೆ ಒಯ್ಯುವಾಗ ಅದನ್ನೇ ಸಾರ್ವಜನಿಕ ಪ್ರದರ್ಶನ ಎಂದು ನಿರ್ಣಯಿಸಿ ಕೇಸು ದಾಖಲಿಸಿ ಕೊಂಡರೆ ಏನು ಮಾಡುವುದು ಎಂಬ ಪ್ರಶ್ನೆ ಕೃಷಿಕರದು. ಇದಕ್ಕಾಗಿ ಖುದ್ದು ಪೊಲೀಸರೇ ಕೋವಿಯನ್ನು ತಂದು ಒಪ್ಪಿಸಬೇಕೆಂಬ ಷರತ್ತನ್ನು ಕೃಷಿಕರು ವಿಧಿಸುತ್ತಿ¨ªಾರೆ. ವಿಟ್ಲ ಠಾಣಾ ವ್ಯಾಪ್ತಿಯ ಕೃಷಿಕರೊಬ್ಬರ ಈ ಷರತ್ತಿಗೆ ಕೊನೆಗೂ ಪೊಲೀಸ್ ಇಲಾಖೆ ಒಪ್ಪಿದ್ದು, ಮನೆಗೆ ಹೋಗಿ ಕೋವಿ ಹಸ್ತಾಂತರಿಸಿ ಬಂದಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 9 ಮಂದಿ ಕೃಷಿಕರು ನ್ಯಾಯಾಲಯದ ಮೊರೆ ಹೋಗಿದ್ದು, ಅವರಿಗೆ ಅನುಮತಿ ದೊರಕಿದೆ. 7 ಮಂದಿ ಕೃಷಿಕರು ಠಾಣೆಯಿಂದ ಕೋವಿ ವಾಪಸ್ ಕೊಂಡೊ ಯ್ದಿದ್ದು, ಓರ್ವರು ಠೇವಣಿ ಇಟ್ಟಿರಲಿಲ್ಲ. ಮತ್ತೋರ್ವ ಕೃಷಿಕರ ಒತ್ತಾಯದಂತೆ ಪೊಲೀಸರೇ ಕೋವಿಯನ್ನು ಮನೆಗೆ ತಲುಪಿಸಿದ್ದಾರೆ. ವೈರಲ್ ಆದ ಆಡಿಯೋ
ವಿಟ್ಲದ ಕೃಷಿಕರೊಬ್ಬರು 112 ಸಹಾಯವಾಣಿಗೆ ಕರೆ ಮಾಡಿ, “ತೋಟಕ್ಕೆ ಮಂಗ ಬಂದಿದೆ. ಕೂಡಲೇ ಬರಬೇಕು’ ಎಂದು ಮನವಿ ಮಾಡಿದ್ದರು. ಆ ಆಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಜೆ 5 ಗಂಟೆಯ ವೇಳೆಗೆ ಅವರು ಫೋನ್ ಮಾಡಿದ್ದು, 8 ಗಂಟೆಯ ವೇಳೆಗೆ ವಿಟ್ಲ ಪೊಲೀಸರು ಅವರ ಮನೆಗೆ ಭೇಟಿ ನೀಡಿದ್ದಾರೆ. ಮರುದಿನ ಬೆಳಗ್ಗೆ ಅವರ ಕೋವಿಯನ್ನೂ ಮರಳಿಸಲಾಗಿದೆ.