Advertisement

ಉಗ್ರರಿಗೆ ಬಲಿಯಾದ RSS ನಾಯಕ ಶರ್ಮಾ, ಕಾನ್‌ಸ್ಟೆಬಲ್‌ ಅಂತ್ಯಕ್ರಿಯೆ; ಘರ್ಷಣೆ

09:19 AM Apr 11, 2019 | Team Udayavani |

ಕಿಷ್‌ತ್‌ವಾರ್‌ : ಉಗ್ರರ ದಾಳಿಗೆ ಬಲಿಯಾಗಿದ್ದ ಹಿರಿಯ ಆರ್‌ಎಸ್‌ಎಸ್‌ ನಾಯಕ ಚಂದ್ರಕಾಂತ್‌ ಶರ್ಮಾ ಮತ್ತು ಕಾನ್‌ಸ್ಟೆಬಲ್‌ ರಾಜೀಂದರ್‌ ಕುಮಾರ್‌ ಅವರ ಅಂತ್ಯಕ್ರಿಯೆ ಇಂದು ಪೊಲೀಸರೊಂದಿಗಿನ ಆಕ್ರೋಶಿತ ದುಃಖತಪ್ತರ ಘರ್ಷಣೆಯ ನಡುವೆ ನಡೆಯಿತು.

Advertisement

ಆಕ್ರೋಶಿತ ದುಃಖತಪ್ತರ ಒಂದು ಗುಂಪು ಅಂತ್ಯಕ್ರಿಯೆಯ ಬಳಿಕ ಪೊಲೀಸರೊಂದಿಗೆ ಘರ್ಷಣೆಗೆ ಇಳಿಯತು. ಕೆಲವರು ಎಸ್‌ಪಿ ಕಚೇರಿಗೆ ಹೋಗಿ ಅಲ್ಲಿದ್ದ ಪೀಠೊಪಕರಣಗಳನ್ನು ಹಾಳು ಗೆಡಹಿದರು. ಆದರೂ ಪೊಲೀಸರು ಪರಿಸ್ಥಿತಿಯನ್ನು ತಹಬಂದಿಗೆ ತರುವಲ್ಲಿ ಸಫ‌ಲರಾದರು.

ಡಾಕ್‌ ಬಂಗ್ಲೆ ಪ್ರದೇಶದಲ್ಲಿ ಪ್ರತಿಭಟನಕಾರರು ಪಾಕಿಸ್ಥಾನ ಮತ್ತು ಭಯೋತ್ಪಾದಕರ ವಿರುದ್ಧ ಘೋಷಣೆ ಕೂಗಿದರು. ಚೌಗನ್‌ ಮೈದಾನದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಜಮ್ಮು ಕಾಶ್ಮೀರ ಆರ್‌ಎಸ್‌ಎಸ್‌ ಮುಖ್ಯಸ್ಥ ಸುಚೇತ್‌ ಸಿಂಗ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದರ್‌ ರಾಣಾ, ಮಾಜಿ ಉಪ ಮುಖ್ಯಮಂತ್ರಿ ಡಾ. ನಿರ್ಮಲ್‌ ಸಿಂಗ್‌ ಭಾಗವಹಿಸಿದ್ದರು.

ಕಾನ್‌ಸ್ಟೆಬಲ್‌ ರಾಜಿಂದರ್‌ ಕುಮಾರ್‌ ಅವರ ಅಂತ್ಯಕ್ರಿಯೆ ಕಿಷ್‌ತ್‌ವಾರ್‌ ನ ಮುಘಲ್‌ ಮೈದಾನದಲ್ಲಿ ನಡೆಯಿತು. ನೂರಾರು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next