Advertisement

ಅರುಣಾಚಲದಲ್ಲಿ ಹಿಂಸಾಚಾರ: ಗೋಲಿಬಾರ್‌ಗೆ ಯುವಕ ಬಲಿ

12:30 AM Feb 25, 2019 | |

ಇಟಾನಗರ: ಅರುಣಾಚಲ ಪ್ರದೇಶದಲ್ಲಿ 6 ಸಮುದಾಯಗಳಿಗೆ ಕಾಯಂ ನಿವಾಸಿ ಪ್ರಮಾಣಪತ್ರ ಒದಗಿಸುವ ಶಿಫಾರಸನ್ನು ವಿರೋಧಿಸಿ ನಡೆದ ಪ್ರತಿಭಟನೆಯು ಭಾನುವಾರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಅರುಣಾಚಲದ ಉಪಮುಖ್ಯಮಂತ್ರಿಯ ನಿವಾಸದ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದು, ಇತರೆ ಹಲವು ವಾಹನಗಳಿಗೂ ಅಗ್ನಿಸ್ಪರ್ಶ ಮಾಡಿದ್ದಾರೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಪೊಲೀಸರು ಗೋಲಿಬಾರ್‌ ನಡೆಸಿದ್ದು, ಒಬ್ಬ ಪ್ರತಿಭಟನಾಕಾರ ಮೃತಪಟ್ಟು, ಮತ್ತೂಬ್ಬ ಗಾಯಗೊಂಡಿದ್ದಾನೆ.

Advertisement

ಸಿಎಂ ಪೆಮಾ ಖಂಡು ಅವರ ಖಾಸಗಿ ನಿವಾಸದ ಮೇಲೆ ದಾಳಿ ನಡೆಸಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಬೇಕಾಯಿತು ಎಂದು ಅಧಿಕಾರಿಗಳ ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಪೆಟ್ರೋಲ್‌ ಪಂಪ್‌, ಮಾರುಕಟ್ಟೆ, ಅಂಗಡಿಗಳು ಮುಚ್ಚಿದ್ದು, ಎಟಿಎಂಗಳಲ್ಲಿ ನಗದು ಕೂಡ ಖಾಲಿಯಾಗಿದೆ. ಶುಕ್ರವಾರದಿಂದೀಚೆಗೆ ಸುಮಾರು 150 ವಾಹನಗಳು ಭಸ್ಮವಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆ, ಭಾನುವಾರ ಮಾತನಾಡಿರುವ ಕೇಂದ್ರ ಸಚಿವ ಕಿರಣ್‌ ರಿಜಿಜು, 6 ಸಮುದಾಯಗಳಿಗೆ ಕಾಯಂ ನಿವಾಸಿ ಪ್ರಮಾಣಪತ್ರ ನೀಡುವ ಶಿಫಾರಸನ್ನು ರಾಜ್ಯ ಸರಕಾರ ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next