Advertisement

ಉಡುಪಿ: ಮನೆ ಮುಂಭಾಗ ನಿಲ್ಲಿಸಿರುವ ವಾಹನಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

01:14 PM Apr 06, 2021 | Team Udayavani |

ಉಡುಪಿ: ಅಪರಿಚಿತ ವ್ಯಕ್ತಿಗಳು ಮನೆಯ ಮುಂಭಾಗದಲ್ಲಿ ನಿಲುಗಡೆ ಮಾಡಿರುವ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಎರಡು ಪ್ರತ್ಯೇಕ ಪ್ರಕರಣ ಮಂಗಳವಾರ ನಗರ ಠಾಣೆಯಲ್ಲಿ ದಾಖಲಾಗಿದೆ. ಎರಡು ಕೃತ್ಯಗಳನ್ನು ಒಂದೇ ತಂಡ ಮಾಡಿರುವುದಾಗಿ ಶಂಕಿಸಲಾಗಿದೆ

Advertisement

ಬಡಗಬೆಟ್ಟು ಬೈಲೂರಿನ ಹರೀಶ್ ಕುಮಾರ್ ಭಟ್ (42 ವ) ಅವರು ಎ.5ರಂದು ರಾತ್ರಿ ಬೈಕ್‌ನ್ನು ಮನೆಯಲ್ಲಿ ಪಾರ್ಕ್ ಮಾಡಿದ್ದಾರೆ. ರಾತ್ರಿ 1 ರಿಂದ 2 ಗಂಟೆಯ ಸುಮಾರಿಗೆ ಬಂದ ಅಪರಿಚಿತ ವ್ಯಕ್ತಿಗಳಿಬ್ಬರು, ಮನೆಯವರು ಹೊರಗೆ ಬಾರದಂತೆ ಹೊರಗಿನಿಂದ ಚಿಲಕ ಹಾಕಿ, ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ. 20,000 ರೂ. ನಷ್ಟ ಉಂಟಾಗಿರುವ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ:‘ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ!’

ಅದೇ ಪ್ರದೇಶದ ಅಬ್ದುಲ್ ರಶೀದ್ (50 ವ) ಅವರು ಎ.5ರಂದು ಮನೆಯ ಗೇಟಿನೆದುರು ನಿಲುಗಡೆ ಮಾಡಿರುವ ಆಟೋರಿಕ್ಷಾವನ್ನು ರಾತ್ರಿ 1 ರಿಂದ 2 ಗಂಟೆಯ ಸುಮಾರಿಗೆ ಬಂದ ಅಪರಿಚಿತ ಇಬ್ಬರು ವ್ಯಕ್ತಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. 2.25 ಲ.ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪರ್ಯಾಯ ಸಾರಿಗೆ ಸೌಲಭ್ಯ‌ ಒದಗಿಸಲು ಸನ್ನದ್ಧ: ಬೆಳಗಾವಿ ಡಿಸಿ ಡಾ.ಕೆ.ಹರೀಶ್ ಕುಮಾರ್

Advertisement
Advertisement

Udayavani is now on Telegram. Click here to join our channel and stay updated with the latest news.

Next