Advertisement

ಸೊರಬ:ಕೋವಿಡ್ ನಿಯಮ ಉಲ್ಲಂಘಿಸಿ ದೇವರ ಜಾತ್ರೆ ಆಚರಣೆ 11 ಜನರ ಮೇಲೆ ಪ್ರಕರಣ ದಾಖಲು

10:41 PM Apr 22, 2021 | Team Udayavani |

ಸೊರಬ: ಕೋವಿಡ್ ನಿಯಮ ಉಲ್ಲಂಘಿಸಿ ತಾಲ್ಲೂಕಿನ ಮಂಚಿ ಗ್ರಾಮದ ಶ್ರೀ ಹನುಮಂತ ದೇವರ ಜಾತ್ರೆ ಆಚರಿಸಿದ 11 ಜನರ ಮೇಲೆ ಪ್ರಕರಣ ದಾಖಲಾಗಿದೆ.

Advertisement

ಮಂಚಿ ಗ್ರಾಮದ ಶೇಖರಪ್ಪ, ಉದ್ರಿ ವಡ್ಡಿಗೆರೆ ಗ್ರಾಮದ ಎಚ್. ಶಿವಮೂರ್ತಪ್ಪ, ಶಿವರಾಯಪ್ಪ, ಮಂಚಿಯ ಬಿ.ಕೆ. ಮಾರುತಿ, ಎಸ್. ಮಾರುತಿ, ಉದ್ರಿಯ ಜಗದೀಶ್, ಮಂಚಿಯ ಮೈಲಾರಪ್ಪ, ಚಿರಂಜೀವಿ, ವಾಸುದೇವ, ಉದ್ರಿ ವಡ್ಡಿಗೆರೆಯ ಸುರೇಶ್,  ಭೀಮರಾಯಪ್ಪ, ಬಸವಣ್ಯಪ್ಪ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳ ಜಾತ್ರೆ, ರಥೋತ್ಸವ ಸೇರಿದಂತೆ ಕೆಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ಕಾರ ನಿರ್ಭಂದ ಹೇರಿತ್ತು.

ಕೊರೋನಾ ರೋಗವು ಹರಡದಂತೆ ತಡೆಯಲು ಆದೇಶ ಉಲ್ಲಂಘಿಸಿದ ಆರೋಪಿತರ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next