Advertisement

Renukaswamy ಕುಟುಂಬಕ್ಕೆ ನಟ ವಿನೋದ್‌ ರಾಜ್‌ ಸಾಂತ್ವನ

11:54 PM Jul 26, 2024 | Team Udayavani |

ಚಿತ್ರದುರ್ಗ: ನಟ ದರ್ಶನ್‌ ಮತ್ತು ಗ್ಯಾಂಗ್‌ನಿಂದ ಹತ್ಯೆಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಮನೆಗೆ ಶುಕ್ರವಾರ ನಟ ವಿನೋದ್‌ರಾಜ್‌ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 1 ಲಕ್ಷ ರೂ. ಆರ್ಥಿಕ ನೆರವು ನೀಡಿದರು.

Advertisement

ಈ ವೇಳೆ ರೇಣುಕಾಸ್ವಾಮಿ ತಂದೆ, ತಾಯಿ, ಪತ್ನಿ ಜತೆ ಮಾತನಾಡಿ, ನಿಮ್ಮ ಜತೆಗೆ ನಾವಿದ್ದೇವೆ, ಧೈರ್ಯವಾಗಿರಿ ಎಂದರು. ರೇಣುಕಾಸ್ವಾಮಿ ತಂದೆ ಶಿವಣ್ಣಗೌಡ ಮಾತನಾಡಿ, ನಾವು ನಿಮ್ಮ ತಾಯಿಯ ಸಿನೆಮಾ ನೋಡಿ ಬೆಳೆದವರು. ಆಗ ಎಂತಹ ಕಾಲ ಇತ್ತು, ಈಗ ಎಂತಹ ದಿನಗಳು ಬಂದಿವೆ ನೋಡಿ ಎಂದು ಹೇಳುತ್ತ ಭಾವುಕರಾದರು. ಸುದ್ದಿಗಾರರ ಜತೆ ಮಾತನಾಡಿದ ವಿನೋದ್‌ರಾಜ್‌, ಜೈಲಿನಲ್ಲಿ ದರ್ಶನ್‌ ಭೇಟಿ ಒಂದು ರೀತಿಯ ನೋವಾದರೆ, ಈ ಕುಟುಂಬದ್ದು ಇನ್ನೂ ಭಯಂಕರ ನೋವು ಎಂದು ಹೇಳುತ್ತ ಭಾವುಕರಾದರು.

ಸಂಧಾನದ ಸುಳ್ಳು ಸುದ್ದಿ ಹರಡದಂತೆ ಮನವಿ
ಕೆಲವು ಮಾಧ್ಯಮಗಳಲ್ಲಿ ರೇಣುಕಾಸ್ವಾಮಿ ತಂದೆ ಸಂಧಾನಕ್ಕೆ ಹೊರಟಿದ್ದಾರೆ ಎಂಬರ್ಥದ ಸುದ್ದಿಗಳು ಹರಿದಾಡಿವೆ. ನಾವು ಎಲ್ಲಿಯೂ ಯಾರೊಂದಿಗೂ ಸಂಧಾನ ಎಂದು ಹೇಳಿಲ್ಲ ಎಂದು ಕೊಲೆಯಾದ ರೇಣುಕಾಸ್ವಾಮಿ ತಂದೆ ಶಿವಣ್ಣಗೌಡರು ಬೇಸರ ವ್ಯಕ್ತಪಡಿಸಿದರು.

ಮಗನನ್ನು ಯಾರು ಕೊಲೆ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ, ಕೊಲೆ ಮಾಡಿದವರಿಗೆ ಶಿಕ್ಷೆ ಆದಾಗಲೇ ಮಗನ ಸಾವಿಗೆ ನ್ಯಾಯ ಸಿಗುವುದು. ಕುಟುಂಬ ಸಂಕಷ್ಟದಲ್ಲಿದ್ದು, ಸೊಸೆಗೆ ಸರಕಾರ ಖಾಯಂ ನೌಕರಿ ಕೊಡಬೇಕು ಎಂದು ಕೈ ಮುಗಿದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next