Advertisement

ವೈದಿಕ ವಿಧಿಗಳೊಂದಿಗೆ ಪುನೀತ್ ಗೆ ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟ ವಿನೋದ್ ರಾಜ್

04:39 PM Nov 08, 2021 | Team Udayavani |

ಶ್ರೀರಂಗಪಟ್ಟಣ: ಚಿತ್ರನಟ ಪುನೀತ್ ರಾಜ್ ಕುಮಾರ್ ಅವರ 11 ದಿನದ ಪುಣ್ಯತಿಥಿಯಂದು ಶ್ರೀರಂಗಪಟ್ಟಣದ ಗಂಜಾಮ್ ಬಳಿ ಇರುವ ಸಂಗಮ ದಲ್ಲಿ ನಟ ವಿನೋದ್ ರಾಜ್  ಅವರು ವೈದಿಕ ಕ್ರಿಯಾ ಅಪರ ಕರ್ಮದ ಕಾರ್ಯ ವನ್ನು ನೆರವೇರಿಸಿದರು.

Advertisement

ತಾಯಿ ಲೀಲಾವತಿ ಹಾಗು ಸಮೀಪದ ಬಂಧುಗಳ ಜೊತೆ ಸಂಗಮದ ಕಾವೇರಿ ನದಿ ತೀರಕ್ಕೆ ಆಗಮಿಸಿ ನದಿ ತೀರದಲ್ಲಿ ಮೃತ ಪುನೀತ್ ರಾಜ್ ಕುಮಾರ್ ಗೆ ವೈದಿಕ ಪೂಜಾ ಕೈಂಕರ್ಯ ನೆರವೇರಿಸಿದರು‌.

ಸ್ಥಳದಲ್ಲಿ  ನಾರಾಯಣ ಬಲಿ ಪೂಜೆ ನೆರವೇರಿಸಿ ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟು ಪುನೀತ್ ಆತ್ಮಕ್ಕೆ ಶಾಂತಿ ಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next