Advertisement

ಅಗರ್ವಾಲ್‌ ಯಶಸ್ಸಿಗೆ ವಿನಯ್‌ ಕಾರಣ: ಉತ್ತಪ್ಪ

08:29 PM Oct 04, 2019 | Team Udayavani |

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ವಿಶಾಖಪಟ್ಟಣ ಟೆಸ್ಟ್‌ ಪಂದ್ಯದಲ್ಲಿ ಕರ್ನಾಟಕದ ಆರಂಭಕಾರ ಅಗರ್ವಾಲ್‌ ದ್ವಿಶತಕ ಬಾರಿಸಿ ಮೆರೆದದ್ದು ಈಗ ಇತಿಹಾಸ. ಅವರ ಈ ಯಶಸ್ಸಿಗೆ ಕರ್ನಾಟಕದ ಮಾಜಿ ನಾಯಕ ವಿನಯ್‌ ಕುಮಾರ್‌ ಅವರೇ ಕಾರಣ ಎಂದು ಈಗ ಕೇರಳ ಪರ ಆಡುತ್ತಿರುವ ರಾಬಿನ್‌ ಉತ್ತಪ್ಪ ಹೇಳಿದ್ದಾರೆ.

Advertisement

“2017ರ ರಣಜಿ ಋತುವಿನ ವೇಳೆ ಮಾಯಾಂಕ್‌ ಫಾರ್ಮ್ ಅಷ್ಟೇನೂ ಉತ್ತಮವಾಗಿರಲಿಲ್ಲ. ಅವರನ್ನು ತಂಡದಿಂದ ಕೈಬಿಡುವ ಬಗ್ಗೆ ಯೋಚಿಸಲಾಗಿತ್ತು. ಈ ಸಂದರ್ಭದಲ್ಲಿ ನಾಯಕ ವಿನಯ್‌ ಕುಮಾರ್‌ ಮಾಯಾಂಕ್‌ಗೆ ಸ್ಫೂರ್ತಿ ತುಂಬಿದರು. ಇದು ಫ‌ಲ ಕೊಟ್ಟಿತು. ಮಾಯಾಂಕ್‌ ತ್ರಿಶತಕ ಬಾರಿಸಿ ಮೆರೆದಾಡಿದರು. ಬಳಿಕ ಹಿಂದಿರುಗಿ ನೋಡಲಿಲ್ಲ…’ ಎಂದು ರಾಬಿನ್‌ ಉತ್ತಪ್ಪ ನೆನಪಿಸಿಕೊಂಡರು.

ಇದೇ ಸಂದರ್ಭದಲ್ಲಿ ಓಪನರ್‌ಗಳಾದ ರೋಹಿತ್‌ ಶರ್ಮ-ವೀರೇಂದ್ರ ಸೆಹವಾಗ್‌ ನಡುವೆ ತುಲನೆ ಮಾಡುವುದು ಸೂಕ್ತವಲ್ಲ ಎಂದೂ ಉತ್ತಪ್ಪ ಅಭಿಪ್ರಾಯಪಟ್ಟರು. ಇಬ್ಬರೂ ವಿಭಿನ್ನ ಶೈಲಿಯ ಆಟಗಾರರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next