Advertisement

ಜನ್ಮ ದಿನಾಚರಣೆಗಾಗಿ ಹೆಂಡತಿ ಮಕ್ಕಳು ತಂದ ಕೇಕ್, ಹೊಸ ಬಟ್ಟೆ ಹಿಂದೆ ಕಳಿಸಿದ ಕುಲಕರ್ಣಿ

05:05 PM Nov 07, 2020 | sudhir |

ಹುಬ್ಬಳ್ಳಿ: ಜನ್ಮ ದಿನದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ತಂದಿದ್ದ ಕೇಕ್ ಕತ್ತರಿಸಲು ನಿರಾಕರಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ, ತಂದಿದ್ದ ಹೊಸ ಬಟ್ಟೆಗಳನ್ನು ಹಿಂದಕ್ಕೆ ಕಳುಹಿಸಿದ್ದಾರೆ.

Advertisement

ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ವಶದಲ್ಲಿರುವ ಕುಲಕರ್ಣಿ ಅವರನ್ನು ಶನಿವಾರ ಬೆಳ್ಳಗೆ ವಿಚಾರಣೆಗೆ ಇಲ್ಲಿನ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನಕ್ಕೆ ಕರೆತರಲಾಯಿತು.

ನ.7ರಂದು ವಿನಯ ಕುಲಕರ್ಣಿ ಜನ್ಮ ದಿನವಾಗಿದ್ದರಿಂದ, ವಿನಯ ಕುಲಕರ್ಣಿ ಪತ್ನಿ ಹಾಗೂ ಮಕ್ಕಳು ಕೇಕ್, ಹೊಸ ಬಟ್ಟೆಗಳೊಂದಿಗೆ ಆಗಮಿಸಿದ್ದರು.

ಕೇಕ್ ಕತ್ತರಿಸಲು ನಿರಾಕರಿಸಿದ ಅವರು, ಹೊಸ ಬಟ್ಟೆಗಳನ್ನು ವಾಪಸ್ ಕಳುಹಿಸಿದರು. ವಿನಯ ಕುಲಕರ್ಣಿ ಅವರ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ಸಿಎಆರ್ ಮೈದಾನ ಬಳಿ ಕೇಕ್ ಕತ್ತರಿಸುವ ಮೂಲಕ ವಿನಯ ಕುಲಕರ್ಣಿ ಅವರ ಜನ್ಮ ದಿನ ಆಚರಿಸಿದರು.

ಇದನ್ನೂ ಓದಿ:ಕೇಂದ್ರ-ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗೆ ಖಂಡನೆ

Advertisement

Advertisement

Udayavani is now on Telegram. Click here to join our channel and stay updated with the latest news.

Next