Advertisement

ಸಿಎಂ ಬಸವರಾಜ ಬೊಮ್ಮಾಯಿ‌ ಭೇಟಿಯಾದ ವಿನಯ್ ಗುರೂಜಿ

12:25 PM Aug 01, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರನ್ನು ಇಂದು ವಿನಯ್ ಗುರೂಜಿ ಭೇಟಿಯಾಗಿ ಮಾತುಕತೆ ನಡೆಸಿದರು. ಆರ್.ಟಿ ನಗರದಲ್ಲಿರುವ ಬೊಮ್ಮಾಯಿ ನಿವಾಸಕ್ಕೆ ವಿನಯ್ ಗುರೂಜಿ ಆಗಮಿಸಿದ್ದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರಿಗೆ ಶುಭ ಕೋರಲು ಬಂದಿದ್ದೆ. ಅವರು ಮುಖ್ಯಮಂತ್ರಿಯಾಗಿರುವುದಕ್ಕೆ ಖುಷಿ ಆಗಿದೆ ಎಂದರು.

ಅವರು ಈ ಹಿಂದೆಯೂ ಗೃಹ ಸಚಿವರು ಆಗಿದ್ದರು. ಹೀಗಾಗಿ ಸಿಎಂ ಸ್ಥಾನ ನಿಭಾಯಿಸುವುದು ಕಷ್ಟವಾಗಲ್ಲ. ಅವರ ತಂದೆಯ ಟ್ರೈನಿಂಗ್ ಅವರಿಗೆ ಸಾಕಲ್ವ ಎಂದು ವಿನಯ್ ಗುರೂಜಿ ಹೇಳಿದರು.

ಇದನ್ನೂ ಓದಿ:ಚಿಯರ್ ಫಾರ್ ಇಂಡಿಯಾ ಧ್ಯೇಯವಾಕ್ಯದಡಿ ಸೈಕಲ್ ರ‍್ಯಾಲಿ: ಸಿಎಂ ಬೊಮ್ಮಾಯಿ ಚಾಲನೆ

ಸಿಎಂಗೆ ಏನಾದರೂ ಸಲಹೆ ನೀಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ರಾಜಕೀಯ ದೂರ. ನಾನು ರಾಜಕೀಯ ನಾಯಕರಿಗೆ ಸಲಹೆ ಕೊಟ್ಟರೆ ತಮಾಷೆ ಆಗುತ್ತದೆ ಎಂದರು.

Advertisement

ಕೊರೊನಾ ವಿಚಾರವಾಗಿ ಮಾತನಾಡಿದ ಅವರು, ಕೊರೊನಾ ಇದೆ. ಹೀಗಾಗಿ ವ್ಯಾಕ್ಸಿನ್ ಒಂದೇ ಅಲ್ಲ ಪ್ರಾಣಾಯಾಮ ಮಾಡಬೇಕು. ಕಷಾಯ ಸೇವಿಸಬೇಕು. ಅಲೋಪತಿ ಒಂದೇ ಸತ್ಯ ಅಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next