Advertisement

Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ

03:14 PM Apr 13, 2024 | |

ಮಸ್ಕಿ: ಕುಡಿವ ನೀರು ಸರಬರಾಜಿಗೆ ಆಗ್ರಹಿಸಿ ತಾಲೂಕಿನ ಪಾಮನಕಲ್ಲೂರು ‌ಗ್ರಾಮ ಪಂಚಾಯಿತಿ ಕಚೇರಿಗೆ ಬೇಲಿ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.

Advertisement

ಪಂಚಾಯಿತಿ ವ್ಯಾಪ್ತಿಯ ಪಾಮನಕಲ್ಲೂರು, ಚಿಲ್ಕರಾಗಿ, ಆನಂದಗಲ್ ಸೇರಿ ಹಲವು ಗ್ರಾಮಗಳಿಗೆ ಕಳೆದ ಐದಾರು‌ ದಿನಗಳಿಂದ ನೀರು ಸರಬರಾಜು ಸ್ಥಗಿತವಾಗಿದೆ. ನಲ್ಲಿಗಳಿಗೆ ನೀರು ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರದ ಖಾಸಗಿ ಬೋರ್ವೆಲ್ ಮೂಲಕ ನೀರು ತಂದುಕೊಳ್ಳುತ್ತಿದ್ದರು. ಐದಾರು ದಿನಗಳಿಂದ ಪಂಚಾಯಿತಿ‌ ವತಿಯಿಂದ ನೀರು ಸರಬರಾಜು ಆಗದ ಕಾರಣ ರೊಚ್ಚಿಗೆದ್ದ ನೂರಾರು ಮಹಿಳೆಯರು ಪಂಚಾಯಿತಿ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿದರೂ ಯಾವ ಅಧಿಕಾರಿಗಳಿ ಸ್ಥಳಕ್ಕೆ ಆಗಮಿಸಲಿಲ್ಲ. ಆಕ್ರೋಶಗೊಂಡ ಮಹಿಳೆಯರು ಪಂಚಾಯಿತಿ ‌ಕಚೇರಿಗೆ ಜಾಲಿ-ಬೇಲಿ ಹಾಕಿದರು. ಪಿಡಿಒ ರಾಮಣ್ಣ ಸೇರಿ ಗ್ರಾ.ಪಂ. ಸದಸ್ಯರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Sydney ಶಾಪಿಂಗ್ ಮಾಲ್ ನಲ್ಲಿ ಕರಾಳ ಕೃತ್ಯ; ಐವರನ್ನು ಇರಿದು ಕೊಂದ ಆಗಂತುಕ

Advertisement

Udayavani is now on Telegram. Click here to join our channel and stay updated with the latest news.

Next