Advertisement
ಬಾರ್ಯ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯ ನೋಡಲ್ ಅಧಿಕಾರಿಯಾಗಿ ವಿರೂಪಾಕ್ಷಪ್ಪ ಕಾರ್ಯ ನಿರ್ವಹಿಸಿದರೆ, ಗ್ರಾ.ಪಂ. ಅಧ್ಯಕ್ಷೆ ಉಷಾ ಶರತ್ ಅಧ್ಯಕ್ಷತೆ ವಹಿಸಿದ್ದರು.
Related Articles
Advertisement
ಕೆಲವೊಂದು ನಿರ್ಜನ ಪ್ರದೇಶಗಳಲ್ಲಿ ರಾತ್ರಿ ಗಾಂಜಾ ವ್ಯವಹಾರ ನಿರಂತರ ನಡೆಯುತ್ತಿದ್ದು ಹದಿಹರೆಯದವರು ಬಲಿಯಾಗುತ್ತಿದ್ದಾರೆ. ತಡರಾತ್ರಿ ಅಪರಿಚಿತ ವ್ಯಕ್ತಿಗಳು ಕೇರಳ ಮೂಲದ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪೊಲೀಸ್ ಇಲಾಖೆ ನಿಗಾವಹಿಸಬೇಕು ಎಂದು ಬಿ.ಕೆ. ಸುಲೈಮಾನ್ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಉಪ್ಪಿನಂಗಡಿ ಠಾಣೆ ಹೆಡ್ ಕಾನ್ಸ್ಸ್ಟೆಬಲ್ ಕುಶಾಲಪ್ಪ ಅಂತಹ ಪ್ರಕರಣ ಕಂಡು ಬಂದರೆ 112ಕ್ಕೆ ಕರೆ ಮಾಡಿ ಎಂದರು. ಉಪಾಧ್ಯಕ್ಷ ಪಿ.ಕೆ.ಉಸ್ಮಾನ್, ಸದಸ್ಯರಾದ ಧರ್ಣಪ್ಪ ಗೌಡ, ವಸಂತ, ಜಯಶ್ರೀ, ಪವಿತ್ರ, ಕಮಲಾಕ್ಷ, ಬಾಲಕೃಷ್ಣ ಶೆಟ್ಟಿ, ಸರೋಜಿನಿ, ಯಶೋದಾ, ನಝಿಯಾ, ಮೈಮುನಾ, ನವೀನ ಪ್ರಸಾದ್, ಅನುರಾಗ್, ಪುಷ್ಪಾ, ಪ್ರಶಾಂತ್ ಪೈ, ರಾಜೇಶ ರೈ, ನವೀನ ರೈ, ಅಶ್ರಫ್, ಆದಂ, ಜಯಪೂಜಾರಿ, ಗೀತಾ ಎಂ., ವಿಠಲ ಬಂಗೇರ ಉಪಸ್ಥಿತರಿದ್ದರು. ಪಿಡಿಒ ಸುಶೀಲಾ ನಿರೂಪಿಸಿದರು.
ಹಳ್ಳ ಹಿಡಿದ ತನಿಖೆ
ಅಕ್ರಮ ವ್ಯವಹಾರ ಸಮಗ್ರ ತನಿಖೆಗೆ ಒತ್ತಾಯಿಸಿ ವರ್ಷ ಕಳೆದರೂ ಈ ತನಕವು ಸಮಗ್ರ ತನಿಖೆ ವರದಿ ಬಂದಿಲ್ಲ. ತನಿಖೆ ಹಳ್ಳ ಹಿಡಿಯುವಂತಾಗಿದೆ ಎಂದು ಟಿ.ಕೆ. ಸುಲೈಮಾನ್ ಹೇಳಿದರು.
ಮಾಹಿತಿ ಕೊರತೆ
ಗ್ರಾ. ಪಂ.ಮಾಜಿ ಅಧ್ಯಕ್ಷ ರಾಜೇಶ ರೈ ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಅಂತರ್ಜಲ ವೃದ್ಧಿಯ ಯೋಜನೆಯ ಮಾಹಿತಿ ಕೊರತೆ ಇದೆ ಎಂದರು.