Advertisement

ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಕಾರು ಬಿಟ್ಟು ನಾಪತ್ತೆಯಾಗಿದ್ದ ವಿಕ್ರಮ್ ಮೃತದೇಹ ಪತ್ತೆ

09:23 AM Apr 18, 2020 | keerthan |

ಮಂಗಳೂರು: ಇಲ್ಲಿನ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಕೊಲ್ಯ ನಿವಾಸಿ ವಿಕ್ರಮ್ ಗಟ್ಟಿಯವರ ಮೃತದೇಹ ಉಳ್ಳಾಲ ಹೊಯ್ಗೆಯಲ್ಲಿ ಪತ್ತೆಯಾಗಿದೆ.

Advertisement

ಸೋಮೇಶ್ವರ ಕೊಲ್ಯ ನಿವಾಸಿಯಾಗಿರುವ ವಿಕ್ರಮ್ ವಾಃನಗಳ ಬಾಡಿ ವರ್ಕ್ಸ್ ನ ಗ್ಯಾರೇಜ್ ಹೊಂದಿದ್ದರು. ಬುಧವಾರ ರಾತ್ರಿ ಕಾರಿನ ಬ್ಯಾಟರಿ ರಿ ಚಾರ್ಜ್ ಮಾಡಿ ಬರುತ್ತೇನೆಂದು ಮನೆಯಿಂದ ಕೊಣಾಜೆ ಪದವಿಗೆ ತರಳಿದ್ದರು.

ವಿಕ್ರಮ್‌ನ ಕಾರು ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದ್ದು, ಅದರ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು. ಲೈಟ್‌ ಉರಿಯುತ್ತಿತ್ತು ಹಾಗೂ ಮತ್ತು ಎಂಜಿನ್‌ ಚಾಲನಾ ಸ್ಥಿತಿಯಲ್ಲಿತ್ತು. ಕಂಕನಾಡಿ ಪೊಲೀಸರು ಆಗಮಿಸಿ ಪರಿಶೀಲಿಸಿದಾಗ ವಿಕ್ರಮ್‌ಗೆ ಸೇರಿದ ಬ್ಯಾಂಕ್‌ ಪುಸ್ತಕ, ಕಾರಿನ ದಾಖಲೆ ಮತ್ತು ಪಾನ್‌ ಕಾರ್ಡ್‌ ಪತ್ತೆಯಾಗಿತ್ತು.

ನಂತರ ವಿಕ್ರಮ್ ಗಾಗಿ ಹುಡುಕಾಟ ನಡೆದಿತ್ತು. ಇದೀಗ ಅವರ ಮೃತದೇಹ ಉಳ್ಳಾಲ ಹೊಯ್ಗೆಯಲ್ಲಿ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next