Advertisement

ವೀರಶೈವ ಲಿಂಗಾಯತ ಸಂಪ್ರದಾಯದಂತೆ ಸಂಚಾರಿ ವಿಜಯ್ ಅಂತಿಮ ಸಂಸ್ಕಾರ : ಕುಪ್ಪೂರು ಶ್ರೀ

01:50 PM Jun 15, 2021 | Team Udayavani |

ಚಿಕ್ಕಮಗಳೂರು : ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಇಂದು ಮುಂಜಾನೆ ನಟ ಸಂಜಾರಿ ವಿಜಯ್ ಇಹಲೋಕ ತ್ಯಜಿಸಿದ್ದಾರೆ. ಇಂದು ಸಂಜೆ ವಿಜಯ್ ಅವರ ಅಂತ್ಯ ಸಂಸ್ಕಾರವನ್ನು ಅವರ ಹುಟ್ಟೂರಾದ ಚಿಕ್ಕಮಗಳೂರಿನಲ್ಲಿ ನಡೆಸಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರದ ಸ್ಥಳಕ್ಕೆ ಕುಪ್ಪೂರು ಶ್ರೀ ಡಾ.ಯತೀಶ್ವರ ಶಿವಚಾರ್ಯ ಆಗಮಿಸಿದ್ದಾರೆ.

Advertisement

ಇನ್ನು ಶ್ರೀ ಡಾ.ಯತೀಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದೇ ವೇಳೆ ಮಾತನಾಡಿದ ಸ್ವಾಮೀಜಿ, ಸಂಚಾರಿ ವಿಜಯ್ ಸಾವು ನಮ್ಮ ಸಮಾಜಕ್ಕೆ ನುಂಗಲಾರದ ತುತ್ತಾಗಿದೆ. ಯಾವುದೇ ಪಾತ್ರ ಕೊಟ್ರೂ ಅದಕ್ಕೆ ಜೀವ ತುಂಬುವ ಶಕ್ತಿ ವಿಜಯ್ ಗೆ ಇತ್ತು. ಅವರ ಹುಟ್ಟೂರಿನಲ್ಲೇ ಸಂಸ್ಕಾರ ಆಗುತ್ತಿರುವುದು ಸಂತೋಷ ಎಂದು ಹೇಳಿದ್ದಾರೆ.

ಬಂದುಗಳಿರಬೇಕು, ಜೊತೆಗೆ ಮಿತ್ರರೂ ಇರಬೇಕು. ಸಂಚಾರಿ ವಿಜಯ್ ಒಳ್ಳೆಯ ಸ್ನೇಹಿತರನ್ನ ಸಂಪಾದಿಸಿದ್ದಾರೆ. ವೀರಶೈವ ಶೋಡಶ ಸಂಸ್ಕಾರಗಳನ್ನ ನಡೆಸಲಾಗುತ್ತಿದೆ ಎಂದು ಕುಪ್ಪೂರು ಶ್ರೀ ಡಾ.ಯತೀಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next