Advertisement

Vijaypur:ಜಾತ್ರೆ ಜಗಳಕ್ಕೆ ಉದ್ವಿಗ್ನ ಪರಿಸ್ಥಿತಿ: ಮರ್ಮಾಂಗಕ್ಕೆ ಪೆಟ್ಟುಬಿದ್ದು ಓರ್ವ ಗಂಭೀರ

09:16 PM Aug 01, 2024 | Vishnudas Patil |

ವಿಜಯಪುರ : ನಗರದಲ್ಲಿ ಗುರುವಾರ ಸಂಜೆ ನಡೆದ ಜಾತ್ರೆಯಲ್ಲಿ ಇಬ್ಬರು ಯುವಕರ ಮಧ್ಯದ ಜಗಳ ವಿಕೋಪಕ್ಕೆ ತಿರುಗಿ, ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹೆಚ್ಚುವ ಹಾಗೂ ಪೊಲೀಸರು ಲಾಠಿ ಚಾರ್ಜ ನಡೆಸುವ ಮಟ್ಟಕ್ಕೆ ಬಿಗಡಾಯಿಸಿದ ಘಟನೆ ಜರುಗಿದೆ.

Advertisement

ನಗರದ ಗೋಲಗುಂಬಜ್ ಎದುರಿನ ಕುಂಚಿಕೊರವರ ಓಣಿಯಲ್ಲಿ ನಡೆದ ಜಾತ್ರೆಯಲ್ಲಿ ಇಬ್ಬರು ಯುವಕರ ಮರ್ಧಯೆ ಜಗಳ ಆರಂಭಗೊಂಡಿದೆ. ಜಗಳದಲ್ಲಿ 37 ವರ್ಷದ ಸಂತೋಷ ಎಂಬ ವ್ಯಕ್ತಿಯ ಮರ್ಮಾಂಗಕ್ಕೆ ಪೆಟ್ಟು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಇದರಿಂದ ಕುಪಿತರಾದ ಸಂತೋಷ ಕಡೆಯವರು ರಸ್ತೆಯಲ್ಲಿ ಟೈರ್ ಗೆ ಬೆಂಕಿ ಹೆಚ್ಚಿ ಸಂಚಾರ ಬಂದ್ ಮಾಡಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದರು. ವಿಷಯ ತಿಳದು ಸ್ಥಳಕ್ಕೆ ಆಗಮಿಸಿದ ಗೋಲಗುಂಜ ಠಾಣೆ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ.

ಈ ಹಂತದಲ್ಲಿ ಸ್ಥಳೀಯ ಪ್ರತಿಭಟನಾ ನಿರತರು ಪೊಲೀಸರ ವಿರುದ್ಧವೂ ತಿರುಗಿಬಿದ್ದ ಕಾರಣ ಓರ್ವ ಪೊಲೀಸ್‍ಗೆ ಗಾಯವಾಗಿದೆ. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next