Advertisement

ತವರು ಸೇರಿದ 33 ಕಾರ್ಮಿಕರು

04:47 PM Apr 26, 2020 | Naveen |

ವಿಜಯಪುರ: ಲಾಕ್‌ಡೌನ್‌ ಬಳಿಕ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ ಉಡುಪಿ ಸೇರಿ ರಾಜ್ಯ ವಿವಿಧ ಜಿಲ್ಲೆಗಳ ಕಾರ್ಮಿಕರನ್ನು ಶನಿವಾರ ರಾತ್ರಿ ಜಿಲ್ಲಾಡಳಿತ ತವರಿಗೆ ಬೀಳ್ಕೊಟ್ಟಿದೆ.

Advertisement

ಬೇರೆ ಪ್ರದೇಶಗಳಿಂದ ಬಂದು ಲಾಕ್‌ ಡೌನ್‌ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಿಲುಕಿದ್ದ ರಾಜ್ಯದ ಉಡುಪಿ, ಮಂಗಳೂರು, ಬೆಂಗಳೂರು, ಬೆಳಗಾವಿ ಸೇರಿದಂತೆ 9 ಜಿಲ್ಲೆಗಳ 33 ಕಾರ್ಮಿಕರಿಗೆ ಜಿಲ್ಲಾಡಳಿತ ನಗರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿತ್ತು. ಇದೀಗ ಸರ್ಕಾರ ತಾತ್ಕಾಲಿಕ ಪುನರ್ವಸತಿಯಲ್ಲಿರುವ ರಾಜ್ಯದ ಒಳಗಡೆಯ ಅಂತರ ಜಿಲ್ಲಾ ಕಾರ್ಮಿಕರನ್ನು ತವರಿಗೆ ಕಳಿಸಲು ನಿರ್ಧರಿಸಿದೆ.

ಸರ್ಕಾರದ ಸೂಚನೆ ಮೇರೆಗೆ ಬೇರೆ ಬೇರೆ ಸ್ಥಳಗಳಿಗೆ ಸೇರಿದ ಕಾರ್ಮಿಕರಾಗಿದ್ದರಿಂದ ಕೆಲವರು ಸ್ವಂತ ವಾಹನದಲ್ಲಿ, ಮತ್ತೆ ಕೆಲವರು ಬಾಡಿಗೆ ವಾಹನದಲ್ಲಿ ತವರಿಗೆ ಮರಳಿದ್ದಾರೆ. 9 ಜಿಲ್ಲೆಗಳ ಎಲ್ಲ ಕಾರ್ಮಿಕರನ್ನು ಅವರ ತವರಿಗೆ ಕಳಿಸುವ ಮುನ್ನ ವೈದ್ಯಕೀಯ ಪರೀಕ್ಷೆ ನಡೆಸಿ, ಕೋವಿಡ್‌ ಸೋಂಕು ಇಲ್ಲ ಎಂಬುದನ್ನು ದೃಢಪಡಿಸಿಕೊಂಡು ಅವರ ಊರಿಗೆ ಕಳಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next