Advertisement

ವಿಜಯಪುರ :ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಇಬ್ಬರು ನಾಪತ್ತೆ

09:55 AM Jun 12, 2020 | sudhir |

ವಿಜಯಪುರ : ಕೃಷ್ಣಾ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನಾಪತ್ತೆಯಾಗಿರುವ ಘಟನೆ
ವಿಜಯಪುರ ಜಿಲ್ಲೆ ಕೊಲ್ಹಾರ ಬಳಿ ಗುರುವಾರ ಸಂಜೆ ಸಂಭವಿಸಿದೆ.

Advertisement

ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದ ಬಳಿ ನದಿಯಲ್ಲಿ ಮೂವರು ಮೀನುಗಾರರು ತೆಪ್ಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಭಾರಿ ಗಾಳಿ ಮಳೆ ಸುರಿದ ಪರಿಣಾಮ ತೆಪ್ಪ ಮಗುಚಿ ಬಿದ್ದಿದೆ.

ತೆಪ್ಪದಲ್ಲಿದ್ದ ಅಕ್ಷಯ ಲಮಾಣಿ (30), ಪರಶುರಾಮ ಲಮಾಣಿ ( 35 ) ರಮೇಶ ಲಮಾಣಿ ( 38 ) ಈ ಮೂವರಲ್ಲಿ ಇಬ್ಬರು ನದಿಯಲ್ಲಿ ಕಾಣೆಯಾಗಿದ್ದಾರೆ.

ಘಟನೆ ಬೆಳಕಿಗೆ ಬರುವ ಹಂತದಲ್ಲಿ ಕತ್ತಲಾದ ಕಾರಣ ಗುರುವಾರ ಶೋಧ ಕಾರ್ಯಕ್ಕೆ ತೊಂದರೆ ಆಗಿದೆ. ಹೀಗಾಗಿ ಶುಕ್ರವಾರ ಬೆಳಿಗ್ಗೆ ಈಜು ತಜ್ಞರು, ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ನದಿಯಲ್ಲಿ ತೆಪ್ಪ ಮುಳುಗಿ ಕಾಣೆಯಾದವರ ಶೋಧ ಕಾರ್ಯಕ್ಕೆ‌ ಮುಂದಾಗಿದೆ.

ಸುದ್ದಿ ತಿಳಿಯುತ್ತಲೇ ಕೊಲ್ಹಾರ ತಹಶೀಲ್ದಾರ ಎಂ.ಎಸ್. ಭಾಗವಾನ ನೇತೃತ್ವದಲ್ಲಿ ಸ್ಥಳೀಯ ಠಾಣೆ ಪೊಲೀಸರು ಸ್ಥಳಿಯ ಮೀನುಗಾರರ ಸಹಾಯದೊಂದಿಗೆ ಶೋಧ ಕಾರ್ಯ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next