Advertisement

ವಿಜಯಪುರ : ಸಿಡಿಲು ಬಡಿದು ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಸಾವು

08:20 PM Apr 09, 2022 | Team Udayavani |

ವಿಜಯಪುರ: ತೋಟದಲ್ಲಿ ಕೆಲಸ ಮಾಡುವಾಗ ರೈತರೊಬ್ಬರು ಸಿಡಿಲು ಬಡಿದು ಮೃತಪಟ್ಟ ಘಟನೆ ಶನಿವಾರ ಸಂಜೆ ತಿಕೋಟಾ ತಾಲೂಕಿನಲ್ಲಿ ಜರುಗಿದೆ.

Advertisement

ತಿಕೋಟಾ ತಾಲೂಕಿನ ಕೊಟ್ಯಾಳ ಗ್ರಾಮದ ತೋಟದ ವಸ್ತಿಯಲ್ಲಿ ಸಂಜೆ 4;30ಕ್ಕೆ ಸಿಡಿಲ ದುರಂತ ನಡೆದಿದೆ.

ಮೃತ ರೈತನನ್ನು ಕಾಸಪ್ಪ ರಘು ಸಾಳುಂಕೆ (40) ಎಂದು ಗುರುತಿಸಲಾಗಿದೆ. ರೈತ ಕಾಸಪ್ಪ ತೋಟದಲ್ಲಿದ್ದಾಗ ಮಳೆ ಬರುವ ಮುನ್ಸೂಚನೆಯಿಂದ ತೊಗರಿ ಕಟ್ಟಿಗೆ ಸುಡುವುದಕ್ಕಾಗಿ ಬೆಂಕಿ ಹಚ್ಚಲು ಮುಂದಾಗಿದ್ದರು. ಈ ಹಂತದಲ್ಲಿ ಸಿಡಿಲು ಬಡಿದು ಸ್ಥಳದಲ್ಲೆ ಮೃತನಾಗಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ತಿಕೋಟಾ ಠಾಣೆ ಎಸೈ ಶಶಿಕಲಾ ಲಂಗೋಟಿ, ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದು, ತಿಕೋಟಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ : ಕುಂಬಳೆ :ಮನೆಗೆ ನುಗ್ಗಿ ಹಲ್ಲೆಗೈದು ಇಬ್ಬರು ಮಕ್ಕಳ ಅಪಹರಣ: ಪತಿ ವಿರುದ್ಧ ದೂರು ನೀಡಿದ ಪತ್ನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next