Advertisement

Vijayapura: ಮಗು ಇರುವ ಸ್ಥಳ ತಲುಪಿದ ರಕ್ಷಣಾ ತಂಡ ಅಳುವ ಧ್ವನಿ ಆಲಿಕೆ

10:42 AM Apr 04, 2024 | keerthan |

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಸಾತ್ವಿಕ್ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ತಂಡ ಮಗು ಇರುವ ಸ್ಥಳವನ್ನು ತಲುಪಿದೆ. ಸಾತ್ವಿಕ ಅಳುವ ಧ್ವನಿ ಕೇಳಿಸುತ್ತಿದ್ದು ರಕ್ಷಣಾ ತಂಡ ಆಶಾದಾಯಕ ಫಲಿತಾಂಶಕ್ಕೆ ಹತ್ತಿರವಾಗಿದೆ.

Advertisement

ಎನ್.ಡಿ.ಆರ್.ಎಫ್. ತಂಡ ಸುರಂಗ ಕೊರೆದು ಮಗು ಸಿಲುಕಿರುವ ಸ್ಥಳ ತಲುಪಿದ್ದು, ಕ್ಷೀಣ ಧ್ವನಿಯಲ್ಲಿ ಸಾತ್ವಿಕ ಅಳುವ ಧ್ವನಿ ಕೇಳಿಸಿದ್ದು, ರಕ್ಷಣಾ ತಂಡ ಸಂತಸದಲ್ಲಿದೆ.

22 ಅಡಿ ಆಳದಲ್ಲಿ ಕೊಳವೆ ಬಾವಿ ರಂದ್ರ ಪತ್ತೆಯಾಗಿದ್ದು, ಮಗು ಕೆಳಗೆ ಕುಸಿಯದಂತೆ ತಡೆಯನ್ನು ಹಾಕಲಾಗಿದೆ.

ಇದೀಗ ರಕ್ಷಣಾ ತಂಡ ಮಗುವಿನ ದೇಹವನ್ನು ಕೊಳವೆ ಬಾವಿಯ ಮಣ್ಣಿನಿಂದ ಬಿಡಿಸುವ ಕಾರ್ಯದಲ್ಲಿ ತೊಡಗಿದೆ.

ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯುತ್ತಲೇ ತುರ್ತು ಆರೋಗ್ಯ ಉಪಚಾರದ ಬಳಿಕ ವಿಜಯಪುರದ ಆಧುನಿಕ ತಂತ್ರಜ್ಞಾನ ಸೌಲಭ್ಯದ ಆಸ್ಪತ್ರೆಗೆ ದಾಖಲಿಸಲು ಆರೋಗ್ಯ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next