Advertisement

ನಿರ್ಬಂಧ ಉಲ್ಲಂಘಿಸಿ ಬಾಗಿಲು ತೆರೆದ ಸ್ವೀಟ್ ಮಾರ್ಟ್ ಮಾಲೀಕನಿಗೆ ಕಪಾಳ ಮೋಕ್ಷ

10:10 AM Mar 24, 2020 | keerthan |

ವಿಜಯಪುರ: ಕರ್ನಾಟಕ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಕದ್ದುಮುಚ್ಚಿ ವ್ಯಾಪಾರ ನಡೆಸಿದ್ದ ಸ್ವೀಟ್ ಮಾರ್ಟ್ ಮಾಲೀಕನಿಗೆ ಪಿಎಸೈ ಕಪಾಳ ಮೋಕ್ಷ ಮಾಡಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಜರುಗಿದೆ.

Advertisement

ಮಂಗಳವಾರದಿಂದ ರಾಜ್ಯದಲ್ಲಿ ಮಾ.31 ರವರೆಗೆ ಸರ್ಕಾರ  ಕರ್ನಾಟಕ ಲಾಕ್ ಡೌನ್ ಆದೇಶಿಸಿದೆ. ಹೀಗಿದ್ದರೂ ಮುದ್ದೇಬಿಹಾಳ ಪಟ್ಟಣದಲ್ಲಿ ನ್ಯೂ ಈಶ್ವರ ಸ್ವೀಟ್ ಮಾರ್ಟ್ ಮಾಲಿಕ ಕದ್ದುಮುಚ್ಚಿ ವ್ಯಾಪಾರ ನಡೆಸಿದ್ದ. ಇದರಿಂದ ಸ್ಥಳಕ್ಕೆ ತೆರಳಿದ ಎಸೈ ಮಲ್ಲಪ್ಪ ಮಡ್ಡಿ ಅಂಗಡಿ ಮಾಲಿಕನಿಗೆ ಕಪಾಳ ಮೋಕ್ಷ ಮಾಡಿ, ಅಂಗಡಿ ಬಾಗಿಲು ಹಾಕಿಸಿದ್ದಾರೆ.

ನಂತರ ವಹಿವಾಟು ನಡೆಸಿದ್ದ ತರಕಾರಿ ಮಾರುಕಟ್ಟೆಗೆ ತೆರಳಿ ರೈತರು ಹಾಗೂ ತರಕಾರಿ ವ್ಯಾಪಾರಿಗಳಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಸಿ, ಮಾರುಕಟ್ಟೆ ಬಂದ್ ಮಾಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next