Advertisement

Vijayapura; ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಲ್ಲ: ಯೂಟರ್ನ್ ಹೊಡೆದ ಜಿಗಜಿಣಗಿ

05:41 PM Jul 16, 2024 | keerthan |

ವಿಜಯಪುರ: ಸನ್ಮಾನ ಸ್ವೀಕರಿಸಿದ ವೇದಿಕೆಯಲ್ಲಿ ಪಕ್ಷದ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ರಮೇಶ್ ಜಿಗಜಿಣಗಿ, ವೇದಿಕೆ ಇಳಿಯುತ್ತಲೇ ಯೂಟರ್ನ್ ಹೊಡೆದಿದ್ದಾರೆ.

Advertisement

ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಿದ ಬಗ್ಗೆ ಏನನ್ನೂ ಹೇಳಲ್ಲ, ಈಗ ಅದನ್ನು ಬಿಟ್ಟು ಬೇರೆ ಏನನ್ನಾದರೂ ಕೇಳಿ ಎಂದಿದ್ದಾರೆ.

ತಮಗೆ ಪಕ್ಷ ನೀಡಿದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ, ಕೇಂದ್ರದಲ್ಲಿ ಸಂಪುಟ ರಚನೆ ಸಂದರ್ಭದಲ್ಲಿ ಸತತ 7 ಬಾರಿ ಗೆದ್ದಿರುವ ನನ್ನ ಹೆಸರನ್ನು ಹೇಳಲಿಲ್ಲ. ತಮ್ಮ ಹಿರಿತನ ಹಾಗೂ ಅನುಭವ ಪಕ್ಷ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದರಿಂದ ನನಗೆ ನಷ್ಟವಿಲ್ಲ, ಪಕ್ಷಕ್ಕೆ ನಷ್ಟವಿದೆ ಎಂದಿದ್ದರು.

ಕೆಲವೇ ಕ್ಷಣಗಳಲ್ಲಿ ವೇದಿಕೆಯಿಂದ ಕೆಳಗಿದಾಗ ಎದುರಾದ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದಾದ ರಮೇಶ ಜಿಗಜಿಣಗಿ, ಅದನ್ನು ಬಿಟ್ಟು ಬಿಡಿ, ಬೇರೆ ಏನನ್ನಾದರೂ ಕೇಳಿ. ಕೇಂದ್ರದ ನಾಯಕರು ಫೋನ್ ಮಾಡಿದ್ದಾರೆ, ಇಷ್ಟು ಮಾತ್ರ ಹೇಳಬಲ್ಲೆ ಎಂದು ಯೂಟರ್ನ್ ಹೊಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next