Advertisement

Vijayapura; ಯುವತಿಯನ್ನು ಚುಡಾಯಿಸಿ ಚಪ್ಪಲಿಯಿಂದ ಹಲ್ಲೆಗೈದ ಯುವಕ; ಆರೋಪಿ ಪರಾರಿ

12:14 PM Feb 13, 2024 | Team Udayavani |

ವಿಜಯಪುರ: ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಯುವಕನೊಬ್ಬ ಚುಡಾಯಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದ ಘಟನೆ ನಾಗಠಾಣ ಗ್ರಾಮದಿಂದ ವರದಿಯಾಗಿದೆ.

Advertisement

ನಾಗಠಾಣ ಗ್ರಾಮದ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸೋಮವಾರ ಘಟನೆ ಜರುಗಿದೆ. ಕಂಪ್ಯೂಟರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಆಕೆ ಕೇಂದ್ರಕ್ಕೆ ಹೋಗುವಾಗ ಅದೇ ಗ್ರಾಮದ ಶ್ರೀಶೈಲ ಮಸಳಿ ಎಂಬ ಯುವಕ ಕೆಣಕಿದ್ದಾನೆ.  ಆಗ ಕುಪಿತಳಾದ ಶ್ರೀಶೈಲನಿಗೆ ಚಪ್ಪಲಿ ತೋರಿಸಿದ್ದಾಳೆ. ಇದರಿಂದ ಕೆರಳಿದ ಶ್ರೀಶೈಲ ಯುವತಿಗೆ ಚಪ್ಪಲಿಯಿಂದ ಹೊಡೆದು, ಹಲ್ಲೆ ಮಾಡಿದ್ದಾನೆ.

ಘಟನೆಯಿಂದ ಬಾಧಿತ ಯುವತಿ ವಿಜಯಪುರ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದು, ವಿಷಯ ತಿಳಿಯುತ್ತಲೇ ಆರೋಪಿ ತಲೆ ಮರೆಸಿಕೊಂಡು ಪರಾರಿಯಾಗಿದ್ದಾನೆ.

ಯುವತಿ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡುವ ದೃಶ್ಯ ಕಂಪ್ಯೂಟರ್ ಕೇಂದ್ರದ ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ.

ಪೊಲೀಸರು ಆರೋಪಿಯನ್ನು ಬಂಧಿಸಿ, ಕಠಿಣ ಶಿಕ್ಷೆ ಕೊಡಿಸುವ ಮೂಲಕ ನ್ಯಾಯ ದೊರಕಿಸಿ ಕೊಡಬೇಕು ಎಂದು ಬಾಧಿತ ಯುವತಿಯ ಪೋಷಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next