Advertisement

ವಿಜಯಪುರ; ಉಕ್ಕಿ ಹರಿದ ಕೃಷ್ಣಾ ನದಿ ಪ್ರವಾಹ, ರಸ್ತೆಗೆ ಬಂದ ಜಲಚರಗಳು

09:57 AM Aug 07, 2019 | Nagendra Trasi |

ವಿಜಯಪುರ: ಕೃಷ್ಣಾ ನದಿಯ ಪ್ರವಾಹ ಪರಿಸ್ಥಿತಿ ಹೆಚ್ಚುತ್ತಿರುವ ಕಾಣ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಪ್ರದೇಶದ

Advertisement

ಆಲಮಟ್ಟಿ ಸುತ್ತಲೂ ಜಲಚರಗಳು, ವಿಷಜಂತುಗಳು ರಸ್ತೆ ಹಾಗೂ ಜನವಸತಿ ಪ್ರದೇಶಕ್ಕೆ ನುಗ್ಗತೊಡಗಿವೆ.

ಆಲಮಟ್ಟಿ ಬಳಿಯ ಅರಳದಿನ್ನಿ ಗ್ರಾಮದಿಂದ ನದಿಗೆ ಹೋಗುವ ರಸ್ತೆ ಹಾಗೂ ಆಲಮಟ್ಟಿ ಮಾರ್ಗವಾಗಿ ಹುನಗುಂದ, ವಿಜಯಪುರ ಮತ್ತು ಬಾಗಲಕೋಟ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಕೃಷ್ಣಾ ಸೇತುವೆ ಮೇಲೆ ಹಾವು, ಚೇಳು ಹಾಗೂ ಏಡಿಗಳು ರಸ್ತೆಯ ಹರಿದಾಡಲು ಆರಂಭಿಸಿವೆ.

ರಸ್ತೆ‌ ಮಧ್ಯೆ ಜಲಚರಗಳು ಹಾಗೂ ವಿಷಜಂತುಗಳು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಹಲವು ವೈವಿಧ್ಯ ಜೀವಿಗಳು ಬಲಿಯಾಗುತ್ಯಿದ್ದರೆ, ವಾಹನ ಸವಾರರು, ಪಾದಚಾರಿಗಳು ಕೂಡ ಪರದಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next