Advertisement

ಗುಡ್ದಾಪುರ ದಾನಮ್ಮ ದೇವಿ ದರ್ಶನ ರದ್ದು

04:35 PM Mar 23, 2020 | Naveen |

ವಿಜಯಪುರ: ಕೊರೊನಾ ಹಿನ್ನೆಲೆಯಲ್ಲಿ ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಜತ್ತ ತಾಲೂಕಿನ ಗುಡ್ಡಾಪೂರ ದಾನಮ್ಮದೇವಿಯ ದರ್ಶನ ಪ್ರವೇಶ ನಿಷೇಧಿಸಲಾಗಿದೆ. ಯುಗಾದಿ ಹಬ್ಬದ ನಿಮಿತ್ತ ನಡೆಯುತ್ತಿದ್ದ ವಿಶೇಷ ಕಾರ್ಯಕ್ರಮಗಳನ್ನೂ ರದ್ದು ಮಾಡಲಾಗಿದೆ.

Advertisement

ಸೋಮವಾರದಿಂದ ಯುಗಾದಿ ಹಬ್ಬದವರೆಗೆ ದೇವಸ್ಥಾನದಲ್ಲಿ ಯಾವುದೇ ಪೂಜೆ ಇರಲ್ಲ. ವಸತಿ ಸೌಕರ್ಯ ನಿರ್ಬಂ ಧಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಟ್ರಸ್ಟ್‌ ಕಾರ್ಯದರ್ಶಿ ವಿಠ್ಠಲ ಪೂಜಾರಿ ಮೊ.
8007678749 ಇವರನ್ನು ಸಂಪರ್ಕಿಸುವಂತೆ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಪ್ರಕಾಶ ಗಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾನುವಾರ ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಸಂದರ್ಭದಲ್ಲಿ ಸಂಜೆ ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕಿಳಿದ ಎಲ್ಲ ಸೇವಾ ನಿರತರಿಗೆ ಅವರು ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next