Advertisement
ರವಿವಾರ ನಗರದಲ್ಲಿರುವ ಜಿಲ್ಲಾ ಜಾತ್ಯತೀತ ಜನತಾ ದಳದ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಅದ್ಯತೆ ನೀಡಬೇಕಿದೆ. ಇದಕ್ಕಾಗಿ ತಳ ಮಟ್ಟದ ಕಾರ್ಯಕರ್ತರನ್ನು ತಲುಪುವ ಅಗತ್ಯವಿದೆ. ಹೀಗಾಗಿ ಬೇರು ಮಟ್ಟದಲ್ಲಿ ಸಂಘಟಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
Related Articles
Advertisement
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಸವನಬಾಗೇವಾಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಪ್ಪುಗೌಡ ಪಾಟೀಲ (ಮನಗೂಳಿ), ದೇವರಹಿಪ್ಪರಗಿ ಕ್ಷೇತ್ರದ ರಾಜುಗೌಡ ಪಾಟೀಲ, ಮುದ್ದೇಬಿಹಾಳ ಕ್ಷೇತ್ರದ ಮಂಗಳಾದೇವಿ ಬಿರಾದಾರ, ಪಕ್ಷದ ಮುಖಂಡರಾದ ಅಶೋಕ ಮನಗೂಳಿ, ಚಂದ್ರಕಾಂತ ಹಿರೇಮಠ, ಇಜಾಜ್ ಮುಕಬಿಲ್, ಬಸವರಾಜ ಹೊನವಾಡ, ಯಾಕೂಬ ಕೊಪರ, ಬಸವರಾಜ ಮಾಡಗಿ, ಮೈಬೂಬ ಬೇವನೂರ, ಸಿದ್ದು ಕಾಮತ, ಸತ್ತಾರ ಇನಾಮದಾರ, ಮುಕದ್ದಸ ಇನಾಮದಾರ ಮಾತನಾಡಿದರು.
ಶಾಸಸಕರಾದ ಮಾಜಿ ಸಚಿವ ಎಂ.ಸಿ. ಮನಗೂಳಿ ಅಧ್ಯಕ್ಷತೆಯಲ್ಲಿದ್ದ ಕಾರ್ಯಕಾರಿ ಸಮಿತಿಯನ್ನು ಪುನರ್ ಸಂಘಟಿಸಲು ನೂತನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಭೆಯಲ್ಲಿ ಸಂಪೂರ್ಣ ಅಧಿಕಾರ ನೀಡಲಾಯಿತು.
ನೂತನವಾಗಿ ಆಯ್ಕೆಯಾದ ರಾಜ್ಯಘಟಕ ಮಹಿಳಾ ಕಾರ್ಯಧ್ಯಕ್ಷೆ ಮಂಗಳಾದೇವಿ ಬಿರಾದಾರ ಅವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಮುಖಂಡರಾದ ದಸ್ತಗಿರ್ ಸಾಲೋಟಗಿ, ಬಸವರಾಜ ಸುತಾಲೆ, ಬಿ.ಡಿ. ಪಾಟೀಲ (ಹಂಜಗಿ), ಕೌಸರ ಶೇಖ್, ಮಹಾದೇವಿ ತಳಕೇರಿ, ರೇಖಾ ಮಾಶಾಳ, ಸ್ನೇಹಾ ಶೆಟ್ಟಿ, ರೇಣುಕಾ ಮಡಿವಾಳರ, ರಮಿಜಾ ನದಾಫ್, ಅನ್ವರ್ ಮಕಾನದಾರ, ಸುನೀಲ ರಾಠೊಡ, ಹುಸೇನಬಾಷಾ ಬಾಗಾಯತ, ಆರ್.ಎ. ನಿಕ್ಕಂ, ಸೈಯ್ಯದ್ ಅಮಿನ್, ಅರವಿಂದ ಹಂಗರಗಿ, ವಿನೋದ ಕೊಟ್ಯಾಳ, ಸದಾಶಿವ ಜತ್ತಿ, ಸುಭಾಷ್ ನಾಯಕ ಇದ್ದರು. ಜಿಲ್ಲಾ ವಕ್ತಾರ ಎಸ್.ಎಸ್. ಖಾದ್ರಿ ಇನಾಮದಾರ ಸ್ವಾಗತಿಸಿದರು.