Advertisement

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

02:43 PM Mar 19, 2024 | Team Udayavani |

ವಿಜಯಪುರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಜೋಡಿ ಹತ್ಯೆತಾಗಿರುವ ದುರಂತ ಜಿಲ್ಲೆಯಲ್ಲಿ ಸಂಭವಿಸಿದೆ.

Advertisement

ಜಿಲ್ಲೆಯ ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾ ಬಳಿ ಗಣಿ ಗ್ರಾಮದ 35 ವರ್ಷದ ಕಲ್ಲಪ್ಪ ಕುಂಬಾರ ಹಾಗೂ 38 ವರ್ಷದ ಪಾರ್ವತಿ ತಳವಾರ ಹತ್ಯೆ ಮಾಡಲಾಗಿದೆ.

ಮಾರಡಗಿ ತಾಂಡಾ ಬಳಿಯ ಜಮೀನಿನಲ್ಲಿ ಕಲ್ಲಪ್ಪ ಹಾಗೂ ಪಾರ್ವತಿ ಇಬ್ಬರು ಜೊತೆಯಾಗಿ ಇರುವುದನ್ನು ಕಂಡಿರುವ ಪಾರ್ವತಿ ಮನೆಯವರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಹತ್ಯೆಯ ಬಳಿಕ ಶವಗಳ ಮೇಲೆ ಮುಳ್ಳುಕಂಟಿಯನ್ನು ಹಾಕಲಾಗಿದೆ.

ಸುದ್ದಿ ತಿಳಿಯುತ್ತಲೇ ಸಿಪಿಐ ಶರಣಗೌಡ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ನಿಡಗುಂದಿ ಠಾಣೆ ಪೊಲೀಸರು, ತನಿಖೆ ನಡೆಸಿದ್ದು, ತಲೆ ಮರೆಸಿಕೊಂಡಿರುವ ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

Advertisement

ಇದನ್ನೂ ಓದಿ: ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

Advertisement

Udayavani is now on Telegram. Click here to join our channel and stay updated with the latest news.

Next