Advertisement

ಅಕ್ರಮ ಕಸಾಯಿಖಾನೆಗೆ ಪೋಲೀಸರ ದಾಳಿ : ಓರ್ವನ ಬಂಧನ, ಗೋ ಮಾಂಸ ವಶ

09:07 PM Jan 21, 2021 | Team Udayavani |

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಕಸಾಯಿಖಾನೆಯಲ್ಲಿ ಗುರುವಾರ ಗೋಮಾಂಸ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿರುವ ಪೊಲೀಸರು, ಗೋ ಮಾಂಸವನ್ನು ವಶಕ್ಕೆ ಪಡೆದು, ಒಂದು ಎತ್ತನ್ನು ರಕ್ಷಿಸಿದ ಘಟನೆ ನಡೆದಿದೆ.

Advertisement

ಖಚಿತ ಮಾಹಿತಿ ಆಧರಿಸಿ ಕೂಡಗಿ ಠಾಣೆ ಪೊಲೀಸರು ದಾಳಿ ನಡೆಸಿದಾಗ ಸಿಕಂದರಸಾಬ್ ರಾಜೇಸಾಬ್ ಬೇಪಾರಿ ಎಂಬ ಆರೋಪಿ ತನ್ನ ಕಸಾಯಿಖಾನೆಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದದ್ದು ಬಯಲಿಗೆ ಬಂದಿದೆ.

ಬುಧವಾರ ಕೊಲ್ಹಾರ ಸಂತೆಯಲ್ಲಿ ರೈತನೊಬ್ಬನಿಂದ ಕೂಡಗಿ ಗ್ರಾಮದ ಸಿಕಂದರಸಾಬ ಬೇಪಾರಿ ಎರಡು ಎತ್ತುಗಳನ್ನು ಖರೀದಿಸಿದ್ದ. ಅದರಲ್ಲಿ ಒಂದು ಎತ್ತನ್ನು ಗುರುವಾರ ಕಡಿದು ಮಾರಾಟಕ್ಕೆ ಮುಂದಾಗಿದ್ದ.

ವಿಷಯ ಅರಿತ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಖಚಿತ ಮಾಹಿತಿ ಮೆರೆಗೆ ಕೂಡಗಿ ಪೊಲೀಸ್ ಅಧೀಕಾರಿಗಳಿಗೆ ಮಾಹಿತಿ‌ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಗೋಹತ್ಯೆ ನಿಷೇಧ ಪ್ರಾಣಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಇದನ್ನೂ ಓದಿ:ಗ್ರಾಹಕರ ಬರ್ಗರ‌ನ್ನೇ ಸ್ವಾಹಾ ಮಾಡಿದ ಡೆಲಿವರಿ ಬಾಯ್‌!

ಕೂಡಗಿ ಠಾಣೆ ಪಿಎಸ್‌ಐ ರೇಣುಕಾ ಜಕನೂರ, ವಿಶ್ವ ಹಿಂದೂ ಪರಿಷತ ಜಿಲ್ಲಾ ಸಂಚಾಲಕ ತಮ್ಮಣ್ಣ ಬಡಿಗೇರ, ಗೋರಕ್ಷಾ ಪ್ರಮುಖ ವಿರೇಶ ಹಿರೇಮಠ. ವಿಎಚ್‌ಪಿ ಧರ್ಮ ಪ್ರಸಸಾರಕ ಅಪ್ಪು ಚವ್ಹಾಣ. ರಾಹುಲ್ ಜಗತಾಪ ಸೇರಿದಂತೆ ಇತರರು ದಾಳಿಯಲ್ಲಿ ಪಾಲ್ಗೊಂಡು ಸಹಕರಿಸಿದತು. ಈ ಕುರಿತು ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next