Advertisement

ವಿಜಯಪುರ : ಸಿಮೆಂಟ್ ಲಾರಿ ಹರಿದು ಕುರಿಗಾರ, 18 ಕುರಿ ಸಾವು

09:19 PM Sep 01, 2022 | Team Udayavani |

ವಿಜಯಪುರ : ಸಿಮೆಂಟ್ ಲಾರಿ ಹರಿದು ಸ್ಥಳದಲ್ಲೇ ಒಬ್ಬ ಕುರಿಗಾರ ಹಾಗೂ 18 ಕುರಿಗಳು ಸಾವಿಗೀಡಾದ ದುರ್ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218 ರ ಯುಕೆಪಿ ವೃತ್ತದ ಬಳಿ ಗುರುವಾರ ಸಂಜೆ ನಡೆದಿದೆ.

Advertisement

ಚಾಲಕನ ನಿರ್ಲಕ್ಷತನದಿಂದ ವೇಗವಾಗಿ ಬಂದ ಸಿಮೆಂಟ್ ಲಾರಿ ಕುರಿ ಹಿಂಡಿನ ಮೇಲೆ ಹರಿದ ಕಾರಣ ಹೋದ ರಭಸಕ್ಕೆ ಕೊಲ್ಹಾರದ ಕುರಿಗಾರ ರಾಮು ಯಲ್ಲವ್ವ ಗೊಲ್ಲರ (19) ತೆಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹಿಂಡು ಕುರಿ ಮೇಯಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಹಿಂಡಿನಲ್ಲಿದ್ದ 18 ಕುರಿಗಳು ಸ್ಥಳದಲ್ಲೇ ಸಾವಿಗೀಡಾಗಿವೆ. ಅಲ್ಲದೇ ಹಲವು ಕುರಿಗಳು ತೀವ್ರ ಗಾಯಗೊಂಡಿವೆ.

ದುರಂತ ಸಂಭವಿಸುತ್ತಲೇ ಲಾರಿ ಚಾಲಕ ಕೃಷ್ಣಾ ನದಿ ಸೇತುವೆ ಬಳಿಯ ಕೊರೆಮ್ಮ ದೇವಸ್ಥಾನದ ಬಳಿ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.

ಸುದ್ದಿ ತಿಳಿಯುತ್ತಲೇ ಕೊಲ್ಹಾರ ಪೊಲೀಸ್ ಠಾಣೆ ಪಿಎಸ್ಐ ಪ್ರೀತಮ್ ನಾಯಕ ಸಿಬಂದಿ ಜತೆ ಘಟನಾ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಕುರಿಗಳನ್ನು ಪಶು ಆಸ್ಪತ್ರೆಗೆ ರವಾನಿಸಿದ್ದಾರೆ. ಲಾರಿಯನ್ನು ವಶಕ್ಕೆ ಪಡೆದಿರುವ ಕೊಲ್ಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next