Advertisement

Vijayapura: ಸೈಕಲ್, ಟೈರ್ ಗೋದಾಮಿಗೆ ಅಗ್ನಿ ಅವಘಡ : ಲಕ್ಷಾಂತರ ಹಾನಿ

09:04 AM Dec 30, 2023 | Kavyashree |

ವಿಜಯಪುರ: ನಗರದಲ್ಲಿನ ಸೈಕಲ್, ಟೈರ್ ಗೋದಾಮಿನಲ್ಲಿ ಡಿ.30ರ ಶನಿವಾರ ಬೆಳಿಗ್ಗೆ ಏಕಾಏಕಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ.

Advertisement

ನಗರದ ಗಣಪತಿ ಚೌಕ್ ಪ್ರದೇಶದಲ್ಲಿರುವ ಎನ್.ಜೆ. ಮೆಹ್ತಾ ಸೈಕಲ್ಸ್ ಸಂಸ್ಥೆಯ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದೆ.

ಗೋದಾಮಿಗೆ ಬೆಂಕಿ ಆವರಿಸುತ್ತಲೇ ಇಡೀ ಪ್ರದೇಶದಲ್ಲಿ ಭಾರಿ ಪ್ರಮಾಣದ ಹೊಗೆ ಆವರಿಸಿದ್ದು, ವ್ಯಾಪಾರಿ ಕೇಂದ್ರವಾಗಿರುವ ಈ ಪ್ರದೇಶದ ನಿವಾಸಿಗಳು, ಉದ್ಯಮಿಗಳು ಆತಂಕದಲ್ಲಿದ್ದರು.

ಆದರೆ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸೇವೆ ಸಿಬಿಎಸ್, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ನಷ್ಟದ ಅಂದಾಜು ಇನ್ನೂ ಸ್ಪಷ್ಟವಾಗಿಲ್ಲ.

ಸ್ಥಳಕ್ಕೆ ಧಾವಿಸಿರುವ ಎಪಿಎಂಸಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next