Advertisement

Vijayapura: ಲಿಂಗಾಯತ-ಹಿಂದೂ ಧರ್ಮ ಎರಡೂ ಒಂದೇ : ವಚನಾನಂದ ಸ್ವಾಮೀಜಿ 

08:54 PM Aug 12, 2024 | Esha Prasanna |

ವಿಜಯಪುರ: ಲಿಂಗಾಯತ ಹಾಗೂ ಹಿಂದೂ ಧರ್ಮ ಒಂದೇ. ನಾವೆಲ್ಲಾ ಹಿಂದೂಗಳೇ, ಹಿಂದೂ ಎಂಬುದು ಮಹಾಸಾಗರ ಮಹಾಸಾಗರದಲ್ಲಿ ಅನೇಕ ನದಿಗಳು ವಿಲೀನವಾಗಿವೆ ಎಂದು ಹರಿಹರ ವೀರಶೈವ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಪ್ರತಿಪಾದಿಸಿದರು.

Advertisement

ಸೋಮವಾರ ನಗರದಲ್ಲಿ ಜ್ಞಾನಯೋಗಾಶ್ರಮದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ವಚನಾನಂದ ಸ್ವಾಮೀಜಿ, ಹಿಂದೂ ಧರ್ಮದಲ್ಲಿ ಬೌದ್ಧ , ಜೈನ, ಸಿಖ್‌,  ವೀರಶೈವ, ಲಿಂಗಾಯತ, ವೈಷ್ಣವ ಎಂಬ ನದಿಗಳು ಮಹಾಸಾಗರ ಸೇರುತ್ತವೆ ಎಂದರು.

ಶಂಕರಾಚಾರ್ಯರು, ಮಧ್ವಾಚಾರ್ಯರು,  ರಾಮಾನುಜಾಚಾರ್ಯ, ಗುರುನಾನಕರು, ಜ್ಞಾನೇಶ್ವರ, ಬಸವೇಶ್ವರರು ಆಯಾ ಕಾಲ ಘಟ್ಟದಲ್ಲಿ ಅವರ ವಿಚಾರಧಾರೆ ಹೇಳಿದ್ದು, ಅವೇ ಧರ್ಮಗಳಾದವು. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ ಜಗತ್ತಿಗೆ ಹೊಸದನ್ನು ಕೊಟ್ಟರು ಎಂದರು.

ಬಸವೇಶ್ವರರ ಉದಾತ್ತ ವಿಚಾರಗಳ ಸೀಮಿತ ಮಾಡಬಾರದು. ಯಾವುದೇ ಮಹಾನ್ ವ್ಯಕ್ತಿಗಳ ಅನುಕರಣೆ ಮಾಡುವವರನ್ನು ನಾವೇ ಶ್ರೇಷ್ಠವೆಂದು ಟೀಕಿಸಬಾರದು. ಒಂದು ಧರ್ಮದ ಆಚರಣೆಗಳ ಕೀಳಾಗಿ ಕಾಣುವುದು ಹಾಗೂ ಮತ್ತೊಂದು ತತ್ವಗಳನ್ನು ತುಚ್ಛವಾಗಿ ಕಾಣಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next